ಮಾನ್ವಿ: ರಾಜ್ಯ ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ ಅವರ ಮೇಲೆ ಮಾರಣಾಂತಿಕ ಹಲ್ಲೆ ಘಟನೆ ಖಂಡಿಸಿ ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸದಸ್ಯರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಲ್ಲೆಗೊಳಗಾಗಿರುವ ಶಿಕ್ಷಣ ತಜ್ಞ ಡಿ.ಶಶಿಕುಮಾರ ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ಸೇರಿ ಮುಖ್ಯಮಂತ್ರಿಗೆ ಬರೆದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಸಂತೋಷರಾಣಿ ಅವರಿಗೆ ಸಲ್ಲಿಸಲಾಯಿತು.
ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ರಾಜು ತಾಳಿಕೋಟೆ, ಇತರ ಸದಸ್ಯರಾದ ಶೇಖ್ ಫರೀದ್ ಉಮ್ರಿ, ಕೆ.ಈ.ನರಸಿಂಹ, ರಾಜಾ ಸುಭಾಸ್ಚಂದ್ರ ನಾಯಕ, ಎಂ.ಎ.ಎಚ್ ಮುಖೀಮ್, ಶ್ರೀನಿವಾಸ ಎಲ್ ಐಸಿ, ಪ್ರಕಾಶ ಡಿ.ವಿ, ಎಂ.ಎಂ.ಹಿರೇಮಠ, ಕೆ.ನಾಗೇಶ್ವರರಾವ್, ಸೈಯದ್ ಅಹ್ಮದ್ ಮತವಾಲೆ, ಭೀಮರಾಯ ಸೀತಿಮನಿ, ಅಲೀಮ್ ಖಾನ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.