ADVERTISEMENT

ರಾಯಚೂರು | ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:06 IST
Last Updated 2 ಆಗಸ್ಟ್ 2025, 7:06 IST
ಕವಿತಾಳ ಸಮೀಪದ ಯರಮರಸ್‌ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೀಶ್‌ ಕೆ ಅವರು ಸಮಗ್ರ ಯೋಜನೆ ಕುರಿತು ಪರಿಶೀಲಿಸಿದರು.
ಕವಿತಾಳ ಸಮೀಪದ ಯರಮರಸ್‌ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ನಿತೀಶ್‌ ಕೆ ಅವರು ಸಮಗ್ರ ಯೋಜನೆ ಕುರಿತು ಪರಿಶೀಲಿಸಿದರು.   

ರಾಯಚೂರು: ಸಮೀಪದ ಯರಮರಸ್‌ ಹತ್ತಿರ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೀಶ್.ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್‌ ಕಟ್ಟಡಕ್ಕೆ ಅಡಿಪಾಯ ಹಾಕುವುದು ಮತ್ತು ಬೌಂಡರಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.

ಪ್ರಸ್ತಾವಿತ ರನ್‌ವೇ, ಸಿಆರ್‌ಎಫ್, ಎಟಿಸಿ ಕಟ್ಟಡ ಮತ್ತು ಸಮಗ್ರ ಯೋಜನೆಯಲ್ಲಿ ತೋರಿಸಿದಂತೆ ಸ್ಥಳದ ವೀಕ್ಷಣೆ ಮಾಡಿದ ಅವರು ಕಾಮಗಾರಿಯ ಪ್ರಗತಿ ಕುರಿತು ಗುತ್ತಿಗೆದಾರರೊಂದಿಗೆ ಚರ್ಚಿಸಿದರು.

ADVERTISEMENT

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಘವೇಂದ್ರ ಮತ್ತು ಮಹೇಶಕುಮಾರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.