ADVERTISEMENT

ರಾಯಚೂರು ಡಿಸಿ ಕಾರ್ಯಯೋಜನೆಗೆ ಕೇಂದ್ರ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:31 IST
Last Updated 9 ಸೆಪ್ಟೆಂಬರ್ 2020, 16:31 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ‘ಮಹಾಮಾರಿ ದಿನಗಳಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಅನುಸರಿಸಿದ ಆಡಳಿತಾತ್ಮಕ ಉತ್ತಮ ಕ್ರಮಗಳು’ ಕುರಿತು ರಾಯಚೂರು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಮಂಡಿಸಿದ ಗುಣಾತ್ಮಕ ಹಾಗೂ ಸರಳ ಆಡಳಿತಾತ್ಮಕ ಅಂಶಗಳಿರುವ ಪ್ರಾತ್ಯಕ್ಷಿಕೆಯನ್ನು ಕೇಂದ್ರದ ನ್ಯಾಷನಲ್‌ ಸೆಂಟರ್‌ ಫಾರ್‌ ಗುಡ್‌ ಗವರ್ನನ್ಸ್‌ ಪ್ರಧಾನ ನಿರ್ದೇಶಕ ವಿ.ಶ್ರೀನಿವಾಸ್‌ ಅವರು ಪ್ರಶಂಸಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ಆರ್‌.ವೆಂಕಟೇಶಕುಮಾರ್‌ ಅವರ ವೈಯಕ್ತಿಕ ಸಾಧನೆಯಲ್ಲಿ ಈ ಪತ್ರವನ್ನು ಸೇರ್ಪಡೆ ಮಾಡುವಂತೆಯೂ ಹೇಳಿರುವುದು ವಿಶೇಷ.

ಕೇಂದ್ರದ ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಹಾಗೂ ಆಡಳಿತಾತ್ಮಕ ಸುಧಾರಣೆ ಇಲಾಖೆಯು ಕಳೆದ ಸೆಪ್ಟೆಂಬರ್‌ 4 ರಂದು ಆನ್‌ಲೈನ್‌ನಲ್ಲಿ ಈ ಬಗ್ಗೆ ಕಾರ್ಯಾಗಾರ ಆಯೋಜಿಸಿತ್ತು. ಅದರಲ್ಲಿ ಸಂಬಂಧಿತ ಇಲಾಖೆಯ ಸಚಿವರು, ನೀತಿ ಆಯೋಗದ ಕಾರ್ಯದರ್ಶಿ ಹಾಗೂ 117 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ ಒಟ್ಟು 817 ಪ್ರತಿನಿಧಿಗಳು ಭಾಗಿಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.