ಜಾಲಹಳ್ಳಿ: ಕಾಂಗ್ರೆಸ್ ಮುಖಂಡ ವೇಣುಗೋಪಾಲ ನಾಯಕ ಅವರನ್ನು ಲೋಕಸಭಾ ಚುನಾವಣೆಯ ರಾಯಚೂರು ಕ್ಷೇತ್ರದ ಸಂವಹನ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ಪ್ರಚಾರ ಹಾಗೂ ಎಐಸಿಸಿ–ಕೆಪಿಸಿಸಿ ನೀಡುವ ಜವಾಬ್ದಾರಿಗಳನ್ನು ನಿರ್ವಹಿಸಲು ಈಗಾಗಲೇ ಸಂಯೋಜಕರನ್ನು ನೇಮಿಸಲಾಗಿದೆ. ಅವರ ಸಹಕಾರದೊಂದಿಗೆ ಚುನಾವಣಾ ಆಯೋಗ, ಮಾಧ್ಯಮ, ಪ್ರಚಾರ ವೈಖರಿ, ಸಾಮಾಜಿಕ ಜಾಲತಾಣ, ಲೋಕಸಭಾ ಕ್ಷೇತ್ರದಲ್ಲಿ ನಡೆಯುವ ದಿನನಿತ್ಯದ ಚಟುವಟಿಕೆಗಳ ವರದಿಯನ್ನು ಎಐಸಿಸಿ ಹಾಗೂ ಕೆಪಿಸಿಸಿಗೆ ನೀಡಲು ಇವರನ್ನು ನೇಮಕ ಮಾಡಿ ಜಿ.ಸಿ.ಚಂದ್ರಶೇಖರ ಅವರು ಆದೇಶ ಹೊರಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.