ADVERTISEMENT

ಮಾನ್ವಿ | ಹೆದ್ದಾರಿಯಲ್ಲಿ ಪಲ್ಟಿಯಾದ ಲಾರಿ: ವಾಹನಗಳ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 15:17 IST
Last Updated 17 ಏಪ್ರಿಲ್ 2024, 15:17 IST
ಮಾನ್ವಿ ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಪಲ್ಟಿಯಾದ ಲಾರಿ
ಮಾನ್ವಿ ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಪಲ್ಟಿಯಾದ ಲಾರಿ   

ಮಾನ್ವಿ: ಪಟ್ಟಣದ ಹೊರವಲಯದ ಹಿರೇಹಳ್ಳ ಬಳಿ ರಾಜ್ಯ ಹೆದ್ದಾರಿಯಲ್ಲಿ ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿಯಾದ ಘಟನೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ‌ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿಯು ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ರಾಜ್ಯ ಹೆದ್ದಾರಿ ಮಧ್ಯೆ ಲಾರಿ ಪಲ್ಟಿಯಾದ ಕಾರಣ ಸುಮಾರು ನಾಲ್ಕು ತಾಸು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಾಯಚೂರಿನಿಂದ ಬರುವ ವಾಹನಗಳನ್ನು ಸಾತ್ ಮೈಲ್ ಹಾಗೂ ನೀರಮಾನ್ವಿಯಿಂದ ಗುಡದಿನ್ನಿ ಮೂಲಕ ತೆರಳಲು ಕ್ರಮ ಕೈಗೊಂಡರು. ಸಿಂಧನೂರು, ಮಾನ್ವಿಯಿಂದ ರಾಯಚೂರಿಗೆ ಹೋಗುವ ವಾಹನಗಳನ್ನು ಕರಡಿಗುಡ್ಡ, ಗುಡದಿನ್ನಿ ಮೂಲಕ ಕಳುಹಿಸಲಾಯಿತು.

ADVERTISEMENT
ಮಾನ್ವಿ ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಪಲ್ಟಿಯಾದ ಲಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.