ADVERTISEMENT

ಮಾನ್ವಿ: ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 12:40 IST
Last Updated 13 ನವೆಂಬರ್ 2021, 12:40 IST
ಮಾನ್ವಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಸತ್ಯನಾರಾಯಣ ಆರ್. ಮುಷ್ಟೂರು ಮತ್ತಿತರ ಪದಾಧಿಕಾರಿಗಳನ್ನು ಶನಿವಾರ ಆಯ್ಕೆ ಮಾಡಲಾಯಿತು
ಮಾನ್ವಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಸತ್ಯನಾರಾಯಣ ಆರ್. ಮುಷ್ಟೂರು ಮತ್ತಿತರ ಪದಾಧಿಕಾರಿಗಳನ್ನು ಶನಿವಾರ ಆಯ್ಕೆ ಮಾಡಲಾಯಿತು   

ಮಾನ್ವಿ: ತಾಲ್ಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಸತ್ಯನಾರಾಯಣ ಆರ್.ಮುಷ್ಟೂರು ವಕೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ಪಟ್ಟಣದ ಕನಕದಾಸ ಪ್ರಸಾದ ನಿಲಯದಲ್ಲಿ ಸಮಾಜದ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆ ನಡೆಯಿತು.

ಅಧ್ಯಕ್ಷರಾಗಿ ಸತ್ಯನಾರಾಯಣ ಆರ್.ಮುಷ್ಟೂರು, ಗೌರವಾಧ್ಯಕ್ಷರಾಗಿ ಡಾ.ಯಂಕನಗೌಡ ಬೊಮ್ಮನಾಳ ಹಾಗೂ ನಕಾಶಿ ಶರಣಪ್ಪ ಬ್ಯಾಗವಾಟ, ಕಾರ್ಯಾಧ್ಯಕ್ಷರಾಗಿ ಎಂ.ಪ್ರವೀಣಕುಮಾರ, ಪ್ರಧಾನ ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಗೋರ್ಕಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ADVERTISEMENT

ಕನಕದಾಸ ಪ್ರಸಾದ ನಿಲಯದ ನಿರ್ವಹಣೆ, ಸಮಾಜದ ಸಂಘಟನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬೀರಪ್ಪ ಪೂಜಾರಿ ಹಳ್ಳಿಹೊಸೂರು ಹಾಗೂ ರಾಮಣ್ಣ ಪೂಜಾರಿ ಮಾಡಗಿರಿ ಸಭೆಯ ಸಾನ್ನಿಧ್ಯ ವಹಿಸಿದ್ದರು.

ರಾಯಚೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ, ಮುಖಂಡರಾದ ಎಂ.ಈರಣ್ಣ ಗುತ್ತೇದಾರ, ಅಮರೇಶಪ್ಪ ಕೊಡ್ಲಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಈರಣ್ಣ ಮರ್ಲಟ್ಟಿ, ನಿಂಗಪ್ಪ ನಕ್ಕುಂದಿ, ಶಿವನಗೌಡ ಬೊಮ್ಮನಾಳ, ದೇವೇಗೌಡ ಉದ್ಬಾಳ, ರಾಹುಲ್ ಕಲಂಗೇರಾ, ರಾಮಣ್ಣ ಮೇಟಿ, ವೀರೇಶ ನಕ್ಕುಂದಿ, ಮಲ್ಲನಗೌಡ ಬಾಗಲವಾಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.