ADVERTISEMENT

ಚನ್ನಪಟ್ಟಣ ತಾಲ್ಲೂಕು ಸಾಹಿತ್ಯ ಸಮ್ಮೇಳನ 15ರಂದು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2014, 10:14 IST
Last Updated 12 ಫೆಬ್ರುವರಿ 2014, 10:14 IST

ರಾಮನಗರ: ಚನ್ನಪಟ್ಟಣ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 15 ರಂದು ಚನ್ನಪಟ್ಟಣದ ಪುರಭವನದ ಆವರಣದಲ್ಲಿ ಆಯೋಜಿ­ಸಲಾಗಿದೆ.

ಗೋವಿಂದಹಳ್ಳಿ ದೇವೇಗೌಡ ಅವರು ಸಮ್ಮೇಳನದ ಅಧ್ಯಕ್ಷರಾಗಿ­ದ್ದಾರೆ. ಅಂದು ಬೆಳಿಗ್ಗೆ 8- ಗಂಟೆಗೆ ಜರುಗಲಿರುವ ಧ್ವಜಾರೋಹಣ ಕಾರ್ಯ­­ಕ್ರ­ಮ­ದಲ್ಲಿ ರಾಷ್ಟ್ರ ಧ್ವಜಾರೋ­ಹಣವನ್ನು ತಹಶೀಲ್ದಾರ್ ಈ. ಶಿವರು­ದ್ರಪ್ಪ ಹಾಗೂ ಪರಿಷತ್ತಿನ ಧ್ವಜಾರೋ­ಹ­ಣ­ವನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ನೆರವೇರಿಸುವರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಬೆಳಿಗ್ಗೆ 8,-45 ಕ್ಕೆ ಪಂಚದೀಪ ವೃತ್ತ­ದಿಂದ ಆರಂಭವಾಗಿ  ಪುರಭವನದ ವೇದಿಕೆ ತಲುಪಲಿದೆ. ಸಮ್ಮೇಳನದ ಉದ್ಘಾ­ಟನೆಯು ಬೆಳಿಗ್ಗೆ 10.-30 ಗಂಟೆಗೆ ಜರುಗಲಿದ್ದು, ಚನ್ನಪಟ್ಟಣ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು,  ಶಾಸಕ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣ­ಕಾರರಾಗಿ ಸಾಹಿತಿ ಡಾ. ಸಾ.ಶಿ.ಮ­ರುಳಯ್ಯ ಹಾಗೂ ಡಾ. ಎಲ್.ಹನು­ಮಂ­ತಯ್ಯ ಭಾಗವಹಿಸುವರು. ಬೆಂ.­ಗ್ರಾ.­­ಜಿಲ್ಲೆ ಕ.ಸಾ,ಪ ಮಾಜಿ ಜಿಲ್ಲಾ­ಧ್ಯಕ್ಷ  ಸು.ತ.ರಾಮೇಗೌಡ ಉಪಸ್ಥಿತರಿ­ರು­ವರು. ಸಮ್ಮೇಳನಾಧ್ಯಕ್ಷ ಗೋವಿಂದ­ಹಳ್ಳಿ ದೇವೇಗೌಡ ಭಾಷಣ ನುಡಿಗಳ­ನ್ನಾ­ಡುವರು.

ಮಧ್ಯಾಹ್ನ 12-.30 ಕ್ಕೆ ಕವಿಗೋಷ್ಠಿ,  ಮಧ್ಯಾಹ್ನ 2-.15 ಕ್ಕೆ ವಿಚಾರಗೋಷ್ಠಿ, ಸಂಜೆ 4-.15 ಕ್ಕೆ ಸಮ್ಮೇಳನಾ­ಧ್ಯಕ್ಷರೊಂದಿಗೆ ಸಂವಾದ, ಸಂಜೆ 5.-15 ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದ್ದು, ಕನ್ನಡ ಹೋರಾಟ­ಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಸಮಾರೋಪ ಭಾಷಣ ಮಾಡುವರು. ಸಂಸದ ಡಿ.ಕೆ.ಸುರೇಶ್, ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡು­ವರು. ರಾತ್ರಿ 7.-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ತಾ.ಪಂ.ಸಾಮಾನ್ಯ ಸಭೆ 15ರಂದು
ರಾಮನಗರ: ರಾಮನಗರ ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಎ. ಮಂಜುನಾಥ್‌ ಅವರ ನೇತೃತ್ವದಲ್ಲಿ ಇದೇ 15ರಂದು ಬೆಳಿಗ್ಗೆ 11 ಗಂಟೆಗೆ ತಾ,ಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.