ಮಾಗಡಿ: ತಾಲ್ಲೂಕಿನ ಸಾವನದುರ್ಗದ ಸಾವಂಧಿ ವೀರಭದ್ರೇಶ್ವರ ಸ್ವಾಮಿ ಮತ್ತು ಭದ್ರಕಾಳಮ್ಮನವರ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ದೇವಾಲಯ ಕೈಂಕರ್ಯ ಸಮಿತಿಯ ಖಜಾಂಚಿ ಎಲ್.ವಿ.ಲೋಕೇಶ್ ಕುಮಾರ್ ಧರ್ಮಧ್ವಜಾರೋಹಣ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಆಡನಕುಪ್ಪೆ ಮಹೇಶ್ ಹೊರತಂದಿರುವ `ಜಗದೊಡೆಯ ಸಾವಂದಿ ವೀರಭದ್ರೇಶ್ವರ~ ಆಡಿಯೊ ಮತ್ತು ವಿಡಿಯೊ ಕ್ಯಾಸೆಟ್ ಅನ್ನು ಭಕ್ತಮಂಡಳಿಯ ಎಸ್.ಚಂದ್ರಶೇಖರ್, ಪಟೇಲ್ ಚನ್ನವೀರಯ್ಯ ವಂಶಶ್ಥರಾದ ಕೆ.ಸಿ.ಸಚ್ಚಿದಾನಂದ ಮೂರ್ತಿ, ಎಸ್.ರೇಣುಕಾರಾಧ್ಯ ಬಿಡುಗಡೆಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.