ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಸಲ್ಲಿಸಿದ್ದ 21 ಅಭ್ಯರ್ಥಿಗಳ ಪೈಕಿ 18 ನಾಮಪತ್ರಗಳು ಅಂಗೀಕೃತಗೊಂಡಿದ್ದು, ಮೂರು ತಿರಸ್ಕೃತಗೊಂಡವು.
ಜಿಲ್ಲಾಧಿಕಾರಿ ಭವನದಲ್ಲಿನ ಚುನಾವಣಾ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕೆ. ರಾಜೇಂದ್ರ ನೇತೃತ್ವದಲ್ಲಿ ಬುಧವಾರ ನಾಮಪತ್ರ ಪರಿಶೀಲನೆ ಕಾರ್ಯವು ನಡೆಯಿತು. ಯೂಥ್ ಇಂಡಿಯಾ ಪೀಸ್ ಪಾರ್ಟಿಯ ಕೆ.ಎಸ್. ವೇಣುಗೋಪಾಲ್, ಪಕ್ಷೇತರರಾದ ಎಸ್.ಇ. ಮಲ್ಲಿಕಾರ್ಜುನ್ ಹಾಗೂ ಶಿವಣ್ಣ ಸಲ್ಲಿಸಿದ್ದ ನಾಮಪತ್ರಗಳು ತಿರಸ್ಕೃತಗೊಂಡವು.
ನಾಮಪತ್ರ ಹಿಂಪಡೆಯಲು ಇದೇ 29 ಕಡೆಯ ದಿನವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.