ADVERTISEMENT

ಹೊಸಕೋಟೆಯಲ್ಲಿ ಕುಕ್ಕರ್, ಹಣ ವಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 14:08 IST
Last Updated 19 ನವೆಂಬರ್ 2019, 14:08 IST
ಹೊಸಕೋಟೆಯ ನಂದಗುಡಿ ಹೋಬಳಿಯಲ್ಲಿ ಮತದಾರರಿಗೆ ಹಂಚಲು ಇಟ್ಟಿದ್ದ ಕುಕ್ಕರ್ ವಶಕ್ಕೆ ಪಡೆಯಲಾಯಿತು. ನಂದಗುಡಿ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮೀ ನಾರಾಯಣ್ ಇದ್ದರು.
ಹೊಸಕೋಟೆಯ ನಂದಗುಡಿ ಹೋಬಳಿಯಲ್ಲಿ ಮತದಾರರಿಗೆ ಹಂಚಲು ಇಟ್ಟಿದ್ದ ಕುಕ್ಕರ್ ವಶಕ್ಕೆ ಪಡೆಯಲಾಯಿತು. ನಂದಗುಡಿ ಪೊಲೀಸ್ ಠಾಣೆಯ ಪಿಎಸ್ಐ ಲಕ್ಷ್ಮೀ ನಾರಾಯಣ್ ಇದ್ದರು.   

ಹೊಸಕೋಟೆ: ತಾಲ್ಲೂಕಿನ ಉಪ ಚುನಾವಣೆಯ ಹಿನ್ನಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ತಾಲ್ಲೂಕಿನಲ್ಲಿ ಹಣ ಮತ್ತು ಕುಕ್ಕರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಇಟ್ಟಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಮನೆಮನೆಗೆ ವಿತರಿಸಲು ಅಲೀಂ ಪಾಷಾ ಎಂಬುವರ ಮನೆಯಲ್ಲಿ ಇರಿಸಿದ್ದ 53 ಕುಕ್ಕರ್ ಗಳನ್ನು ವಿಚಕ್ಷಣ ದಳದ ಅಧಿಕಾರಿ ಶ್ರೀನಿವಾಸಯ್ಯ ಮತ್ತು ನಂದಗುಡಿ ಪಿಎಸ್ಐ ಲಕ್ಷ್ಮಿನಾರಾಯಣ್ ಅವರ ತಂಡ ವಶಕ್ಕೆ ಪಡೆದು ನಂದಗುಡಿ ಠಾಣೆಯಲ್ಲಿ ದೂರು ದಾಖಲಿಸಿದೆ.

ಮತ್ತೊಂದು ಪ್ರಕರಣದಲ್ಲಿ ನಗರದ ಕೆಇಬಿ ಸರ್ಕಲ್ ಬಳಿ ಪರಿಶೀಲಿಸಿದ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 7.50 ಲಕ್ಷ ನಗದನ್ನು ನಗರದ ಪಿಎಸ್ಐ ರಾಜು ನೇತೃತ್ವದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಗೋವಿಂದರಾಜು ಮತ್ತು ವೇಣುಗೋಪಾಲ್ ದೇವನಹಳ್ಳಿ ತಾಲ್ಲೂಕಿನವರಾಗಿದ್ದು ಹಣಕ್ಕೆ ದಾಖಲೆಯಿಲ್ಲದ ಕಾರಣ ಹಣವನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.