ADVERTISEMENT

ರಸ್ತೆ ದುರಸ್ತಿ ನೆಪದಲ್ಲಿ ಮರಗಳ ಮಾರಣಹೋಮ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 5:09 IST
Last Updated 21 ಸೆಪ್ಟೆಂಬರ್ 2021, 5:09 IST
ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದ ಎಂ.ಜಿ. ರಸ್ತೆಯಲ್ಲಿ ಮರಗಳನ್ನು ಕತ್ತರಿಸಿರುವುದು
ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದ ಎಂ.ಜಿ. ರಸ್ತೆಯಲ್ಲಿ ಮರಗಳನ್ನು ಕತ್ತರಿಸಿರುವುದು   

ಕುದೂರು(ಮಾಗಡಿ): ಗ್ರಾಮದ ಎಂ.ಜಿ. ರಸ್ತೆಯಲ್ಲಿದ್ದ ಐದು ಮರಗಳನ್ನು ರಸ್ತೆ ದುರಸ್ತಿ ನೆಪದಲ್ಲಿ ಹರಾಜು ಮಾಡಿ ಕತ್ತರಿಸಲಾಗುತ್ತಿದೆ.

ಸಾವಿರಾರು ಪಕ್ಷಿಗಳಿಗೆ ಆಶ್ರಯ ನೀಡಿದ್ದ ಮರಗಳನ್ನು ಕತ್ತರಿಸುತ್ತಿರುವುದರಿಂದ ಗೂಡುಗಳಲ್ಲಿದ್ದ ಮರಿಗಳನ್ನು ರಕ್ಷಿಸಲು ಪಕ್ಷಿಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಲೋಕೋಪಯೋಗಿ ಇಲಾಖೆಗೆ ಸೇರಿರುವ ರಸ್ತೆಯಲ್ಲಿ ಮರಗಳ ಮಾರಣಹೋಮ ನಡೆದಿದೆ.

ಗ್ರಾಮದಲ್ಲಿ ಮರಗಳನ್ನು ಕತ್ತರಿಸಿರುವುದರಿಂದ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮರಗಳನ್ನು ಕತ್ತರಿಸದೆ ರಸ್ತೆ ದುರಸ್ತಿ ಮಾಡಿಸಬಹುದಿತ್ತು. ವಿವೇಚನೆ ಇಲ್ಲದ ಅಧಿಕಾರಿಗಳು ಪರಿಸರ ರಕ್ಷಿಸುವ ಬದಲು ನಾಶ ಮಾಡುತ್ತಿದ್ದಾರೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.