ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ಭತ್ತದ ಗದ್ದೆಯನ್ನು ಆನೆಗಳ ಹಿಂಡು ಹಾನಿ ಮಾಡಿದೆ.
ಗ್ರಾಮದ ಸರ್ವೆ ಸಂಖ್ಯೆ 218ರಲ್ಲಿ ಇರುವ ರೇಣುಕಯ್ಯ ಎಂಬುವರಿಗೆ ಸೇರಿದ ಭತ್ತದ ಗದ್ದೆಗೆ ಸೋಮವಾರ ನಸುಕಿನಲ್ಲಿ ದಾಳಿ ನಡೆಸಿದ ಆನೆಗಳು ಇಡೀ ಜಮೀನಿನಲ್ಲಿ ಓಡಾಡಿ ಬೆಳೆಯನ್ನು ನಾಶ ಮಾಡಿವೆ.
ಕೆಲವು ದಿನದ ಹಿಂದಷ್ಟೇ ಪೈರು ನಾಟಿ ಮಾಡಿದ್ದು, ಆನೆಗಳಿಂದಾಗಿ ಫಸಲು ಹಾಳಾಗಿದೆ. ಈ ಭಾಗದಲ್ಲಿ ಆನೆ ದಾಳಿ ನಿರಂತರವಾಗಿದ್ದು, ಅವುಗಳನ್ನು ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಸ್ಥಳೀಯ ರೈತರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.