ADVERTISEMENT

ಸ್ಯಾನಿಟೈಸರ್‌ನಿಂದ ಸ್ವಚ್ಚಗೊಳಿಸಿ ಸಾಮಾಜಿಕ ಕಾಳಜಿ ವಹಿಸಿದ ಪತ್ರಿಕೆ ವಿತರಕರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:28 IST
Last Updated 24 ಮಾರ್ಚ್ 2020, 10:28 IST
ಕನಕಪುರದಲ್ಲಿ ಪ್ರಜಾವಾಣಿ ವಿತರಕರು ಕೈಗಳಿಗೆ ಸ್ಯಾನಿಟೈಸರ್‌ ಬಳಸಿ ಪತ್ರಿಕೆ ಬಂಡಲ್‌ ಸಿದ್ಧತೆಯಲ್ಲಿ ತೊಡಗಿದ್ದರು
ಕನಕಪುರದಲ್ಲಿ ಪ್ರಜಾವಾಣಿ ವಿತರಕರು ಕೈಗಳಿಗೆ ಸ್ಯಾನಿಟೈಸರ್‌ ಬಳಸಿ ಪತ್ರಿಕೆ ಬಂಡಲ್‌ ಸಿದ್ಧತೆಯಲ್ಲಿ ತೊಡಗಿದ್ದರು   

ಕನಕಪುರ: ಕೊರೊನಾ ವೈರಸ್‌ ಹರಡುವಿಕೆ ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಿಕೆಯ ವಿತರಕರು ಭಾನುವಾರ ಬೆಳಿಗ್ಗೆ ಪತ್ರಿಕೆ ಹಂಚಿಕೆ ಮಾಡುವುದಕ್ಕಿಂತ ಮುಂಚಿತವಾಗಿ ಕೈಗಳಿಗೆ ಸ್ಯಾನಿಟೈಸರ್‌ ಸಿಂಪರಣೆ ಮಾಡಿಕೊಂಡು ಕಾರ್ಯ ನಿರ್ವಹಿಸಿದರು.

ಸೋಂಕು ವ್ಯಕ್ತಿಗಳಿಂದ ವ್ಯಕ್ತಿಗೆ ಹರುಡುತ್ತದೆ ಎಂಬ ಕಾರಣಕ್ಕೆ ಪತ್ರಿಕೆಯನ್ನು ಮುಟ್ಟಿ ಮನೆಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ರೋಗಾಣುಗಳು ಪತ್ರಿಕೆ ಮೂಲಕ ಹರಡದಂತೆ ಜಾಗೃತಿವಹಿಸುವ ಕೆಲಸವನ್ನು ಪ್ರಜಾವಾಣಿ ಸಂಸ್ಥೆಯು ಮಾಡಿದೆ.

ಪತ್ರಿಕೆಯ ವಿತರಣೆ ಸಂದರ್ಭದಲ್ಲಿ ಹಂಚಿಕೆ ಕಾರ್ಯ ಮಾಡುವ ಎಲ್ಲರೂ ಕೈಗಳಿಗೆ ಗ್ಲೌಸ್‌ ಹಾಕಿಕೊಳ್ಳುವುದು, ಇಲ್ಲವೆ ಸ್ಯಾನಿಟೈಸರನ್ನು ಸಿಂಪರಣೆ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಕಳಕಳಿವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.