ADVERTISEMENT

ರಾಮನಗರ | ಎತ್ತಿನಗಾಡಿ ಓಟ ಸ್ಪರ್ಧೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 4:45 IST
Last Updated 15 ಮೇ 2022, 4:45 IST
ಗೋಪಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ತ್ರಿಪುರ ರಾಜ್ಯದ ಸಿವಿಲ್ ಸರ್ವಿಸ್ ಪ್ರಶಿಕ್ಷಣಾರ್ಥಿಗಳು 
ಗೋಪಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ತ್ರಿಪುರ ರಾಜ್ಯದ ಸಿವಿಲ್ ಸರ್ವಿಸ್ ಪ್ರಶಿಕ್ಷಣಾರ್ಥಿಗಳು    

ಚನ್ನಪಟ್ಟಣ: ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಭಾನುವಾರ (ಮೇ 15) ಏರ್ಪಡಿಸಿದ್ದ ಮೊದಲನೇ ವರ್ಷದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಸತತ ಮಳೆಯ ಕಾರಣದಿಂದ ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅಭಿಮಾನಿಗಳ ಬಳಗ ಹಾಗೂ ಹಳ್ಳಿಕಾರ್ ಗೆಳೆಯರ ಬಳಗದಿಂದ ಮೊದಲನೇ ವರ್ಷದ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದಕ್ಕೆ ಬೇಕಾದ ಸಿದ್ಧತೆಗಳೂ ನಡೆದಿದ್ದವು. ಆದರೆ, ಸತತ ಮಳೆಯಿಂದ ಸ್ಪರ್ಧೆ ನಡೆಸುವ ಮೈದಾನ ಒದ್ದೆಯಾಗಿದೆ. ಹಾಗಾಗಿ, ಸ್ಪರ್ಧೆ ನಡೆಸುವುದು ಸೂಕ್ತವಲ್ಲವೆಂದು ತೀರ್ಪುಗಾರರು ತೀರ್ಮಾನಿಸಿರುವ ಕಾರಣ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ಪರ್ಧೆ ನಡೆಸುವ ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.