ರಾಮನಗರ:ಎಪಿಎಂಸಿ ಬಳಿ ಸೋಮವಾರ ಸಂಚಾರ ಪೊಲೀಸರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಟ್ಟಿಗೆದಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಗರ ಹಾಗೂ ಗ್ರಾಮೀಣ ಜನರಿಗೆ ವಾಹನ ತಪಾಸಣೆ ನೆಪದಲ್ಲಿ ಇನ್ನಿಲ್ಲದ ಕಿರುಕುಳ ನೀಡಿ ದಂಡ ವಿಧಿಸುತ್ತಿದ್ದೀರಿ. ಒಂದೇ ಹೆದ್ದಾರಿಯಲ್ಲಿ ನಾಲ್ಕಾರು ಕಡೆ ಗುಂಪು ಕಟ್ಟಿ ನಿಂತು ಜನರನ್ನು ಹೆದರಿಸುತ್ತೀರಿ? ಬರೀ ದಂಡ ವಿಧಿಸುವುದಷ್ಟೇ ನಿಮ್ಮ ಕೆಲಸವೇ? ಇನ್ನಾದರೂ ಪೊಲೀಸರು ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾನೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಂಭಾಗ ಜನರೊಂದಿಗೆ ಧರಣಿ ಕೂರುತ್ತೇನೆ. ಈ ಬಗ್ಗೆ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ ಎಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.