ಮಾಗಡಿ: ತಿರುಮಲೆ ಕಲ್ಯಾಣ ವರಪ್ರದ ಶ್ರೀನಿವಾಸ ಸ್ವಾಮಿ ಜಾತ್ರಾ ಮಹೋತ್ಸವ ಫೆ.6 ರಿಂದ 10 ರ ತನಕ ನಡೆಯಲಿದೆ ಎಂದು ಪ್ರಧಾನ ಅರ್ಚಕ ಶ್ರೀನಿವಾಸ ರಂಗನ್ ತಿಳಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಫೆ.6ರಂದು ಬೆಳಿಗ್ಗೆ 9 ಗಂಟೆಗೆ ಮಂಗಳಸ್ನಾನ, ಫೆ.7 ರಂದು ಬೆಳಿಗ್ಗೆ 10 ಗಂಟೆಗೆ ನವಗ್ರಹ ಪೂಜೆ, ಪುಷ್ಪಾಲಂಕಾರ, 10.40ರಿಂದ 11 ರೊಳಗೆ ದಿವ್ಯರಥಾರೋಹಣ ನಡೆಯಲಿದೆ ಎಂದರು.
ರಾತ್ರಿ 8.30ಕ್ಕೆ ಮುತ್ತಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ. 8 ರಂದು ರಾತ್ರಿ 8 ಗಂಟೆಗೆ ರಾಜಬೀದಿ ಉತ್ಸವ, ರಾತ್ರಿ ಉಯ್ಯಾಲೆ ಉತ್ಸವ ನಡೆಯಲಿವೆ.
ಫೆ.9ರಂದು ಮಧ್ಯಾಹ್ನ 3 ಗಂಟೆಗೆ ರಾಜಬೀದಿ ಉತ್ಸವ, ರಾತ್ರಿ 8 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, 9 ಗಂಟೆಗೆ ಡೋಲೋತ್ಸವ, 10 ಗಂಟೆಗೆ ಶಯನೋತ್ಸವ ನಡೆಯಲಿದೆ. ಫೆ.10ರಂದು ಪ್ರಾಕಾರೋತ್ಸವ, ಗರುಡವಾಹನ ಸೇವೆ ನಡೆಯಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.