ADVERTISEMENT

ಮಾಗಡಿ: ಶಾಲೆ ನೀರಿನ ಪೈಪ್‌ ಕತ್ತರಿಸಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 13:28 IST
Last Updated 2 ಜನವರಿ 2019, 13:28 IST
ಗುಮ್ಮಸಂದ್ರ ಸರ್ಕಾರಿ ಶಾಲೆಯಲ್ಲಿ ಕಿಡಿಗೇಡಿಗಳು ಕುಡಿಯುವ ನೀರನ ಪೈಪ್‌ ಕತ್ತರಿಸಿರುವುದನ್ನು ವೀಕ್ಷಿಸಿದ ಗ್ರಾಮದ ಮುಖಂಡ ಶಾಂತರಾಜು.
ಗುಮ್ಮಸಂದ್ರ ಸರ್ಕಾರಿ ಶಾಲೆಯಲ್ಲಿ ಕಿಡಿಗೇಡಿಗಳು ಕುಡಿಯುವ ನೀರನ ಪೈಪ್‌ ಕತ್ತರಿಸಿರುವುದನ್ನು ವೀಕ್ಷಿಸಿದ ಗ್ರಾಮದ ಮುಖಂಡ ಶಾಂತರಾಜು.   

ಮಾಗಡಿ: ಗುಮ್ಮಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂತನ ವರ್ಷದ ರಾತ್ರಿ ಕಿಡಿಗೇಡಿಗಳು ಕುಡಿದು ದಾಂದಲೆ ಮಾಡಿ, ಕುಡಿಯುವ ನೀರನ ಪೈಪ್‌ ಕತ್ತರಿಸಿದ್ದಾರೆ ಎಂದು ಮುಖ್ಯಶಿಕ್ಷಕ ಶಿವಕುಮಾರ್‌ ತಿಳಿಸಿದರು.

ಇದರಿಂದ ನೀರು ಪೋಲಾಗುತ್ತಿದೆ ಎಂದರು. ಶಾಲಾ ಆವರಣದ ತೆಂಗಿನ ಮರಗಳಲ್ಲಿ ಇದ್ದ ಎಳನೀರು ಕಿತ್ತು ಕುಡಿದು, ತೆಂಗಿನ ಮರಕ್ಕೆ ಜಖಂ ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದರು.

ಪರಂಗಿಚಿಕ್ಕನ ಪಾಳ್ಯದ ಮುಖಂಡ ಶಾಂತರಾಜು, ಶಾಲೆಗೆ ಭೇಟಿ ನೀಡಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.