ADVERTISEMENT

ಕೋಡಿಹಳ್ಳಿ ವಿಎಸ್‌ಎಸ್ಎನ್‌ಗೆ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 20:00 IST
Last Updated 21 ಫೆಬ್ರುವರಿ 2020, 20:00 IST
ಕೋಡಿಹಳ್ಳಿ ವಿಎಸ್‌ಎಸ್‌ಎನ್‌ ಗೆ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ನಿರ್ದೇಶಕರು
ಕೋಡಿಹಳ್ಳಿ ವಿಎಸ್‌ಎಸ್‌ಎನ್‌ ಗೆ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ನಿರ್ದೇಶಕರು   

ಕೋಡಿಹಳ್ಳಿ (ಕನಕಪುರ): ಇಲ್ಲಿನ ಕೋಡಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್‌ ಬೆಂಬಲಿತ ಕೆ.ಟಿ. ಕೆಂಚೇಗೌಡ ಮತ್ತು ಬೋಳಮಾದಯ್ಯ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ನಡೆದಿದ್ದ ಚುನಾವಣೆಯಲ್ಲಿ 11 ನಿರ್ದೇಶಕರು ಅವಿರೋಧವಾಗಿ ಅಯ್ಕೆಯಾಗಿದ್ದರು. ಈ ಸ್ಥಾನಗಳಿಗೆ ಚುನಾವಣಾಧಿಕಾರಿ ಡಿ.ಎಂ.ಮಹಮ್ಮದ್‌ ನದೀಮ್‌ ಚುನಾವಣೆ ನಡೆಸಿದರು.

ಎರಡೂ ಸ್ಥಾನಗಳಿಗೆ ಒಂದೊಂದೇ ನಾಮಪತ್ರ ಬಂದಿದ್ದರಿಂದ ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ವಿಶೇಷ ಅಧಿಕಾರಿ ಮಲ್ಲೇಶಯ್ಯ, ಮುಖ್ಯ ಕಾರ್ಯ ನಿರ್ವಾಹಕ ನಂಜೇಗೌಡ ಉಪಸ್ಥಿತರಿದ್ದರು.

ADVERTISEMENT

ಸಂಘದ ನಿರ್ದೇಶಕರಾದ ರಾಜೇಂದ್ರ, ಮಾದೇಗೌಡ, ಶಿವಣ್ಣ, ಶಿವಕುಮಾರ್‌, ವೆಂಕಟೇಶ್, ವಿದ್ಯಾ, ಸರೋಜಮ್ಮ, ಮುನಿಮಾದಯ್ಯ, ಶಿವರುದ್ರ ಹಾಗೂ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಎಚ್‌.ಗೋಪಾಲಕೃಷ್ಣ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಬಸಪ್ಪ, ಕಾಂಗ್ರೆಸ್‌ ಮುಖಂಡರಾದ ಕೆ.ಎಂ. ರಾಜೇಂದ್ರ, ಕೆ.ಎಂ.ಮಾದೇಶ್‌, ರಮೇಶ್‌, ಸೋಮಣ್ಣ, ಚಿಂದಾರಿಗೌಡ, ಗಣೇಶ್‌, ಲೋಕೇಶ್‌, ದುಂಡುಮಾದಯ್ಯ, ಮುನಿಯಪ್ಪ, ನಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.