ADVERTISEMENT

ಈಗಲ್‌ ಟನ್‌ ರೆಸಾರ್ಟ್‌ಗೆ ಸಿದ್ದರಾಮಯ್ಯ; ಕೆಲ ಸಮಯದಲ್ಲೇ ಸಭೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 11:35 IST
Last Updated 19 ಜನವರಿ 2019, 11:35 IST
   

ಬಿಡದಿ:ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶನಿವಾರ ಮಧ್ಯಾಹ್ನ 4.30ಕ್ಕೆ ಈಗಲ್ ಟನ್ ರೆಸಾರ್ಟ್‌ಗೆ ಬಂದಿದ್ದು, ಕೆಲ ಹೊತ್ತಿನಲ್ಲೇ ಸಭೆ ಆರಂಭವಾಗುವ ನಿರೀಕ್ಷೆ ಇದೆ.

ಉಪ‌ ಮುಖ್ಯಮಂತ್ರಿ ಜಿ.‌ ಪರಮೇಶ್ವರ್ ಸಹಿತ ಪ್ರಮುಖರು ರೆಸಾರ್ಟ್‌ ಒಳಗೆ ಇದ್ದಾರೆ. ಡಿ.ಕೆ. ಶಿವಕುಮಾರ್ ಸಹಿತ‌ ನಾಲ್ವರು‌ ಸಚಿವರು ಹಾಗೂ ಕೆಲ ಶಾಸಕರು ಹೊರಗೆ ಹೋಗಿದ್ದಾರೆ.

‘ಬಳ್ಳಾರಿ‌ ಜಿಲ್ಲಾ ಮಿನರಲ್ ಫಂಡ್ ಬಳಕೆ ಕುರಿತು ವಿಧಾನಸೌಧದ ಕೊಠಡಿ‌ ಸಂಖ್ಯೆ 106ರಲ್ಲಿ ಸಭೆ ನಿಗದಿಯಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಅನುದಾನ ಬಳಕೆ ಬಗ್ಗೆ ಚರ್ಚಿಸಿ ಅಂತಿಮಗೊಳಿಸಬೇಕಿದೆ. ಹೀಗಾಗಿ ಮೂವರು ಸಚಿವರು ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು ಸಭೆಗೆ ತೆರಳುತ್ತಿದ್ದೇವೆ. ಸಭೆ ಬಳಿಕ ರೆಸಾರ್ಟ್‌ಗೆ ವಾಪಸ್ ಆಗುತ್ತೇವೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.