ಕನಕಪುರ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಮರಳವಾಡಿ ಹೋಬಳಿಯ ಕೀರಣಗೆರೆ ಗ್ರಾಮದಲ್ಲಿ ರಾಮಣ್ಣ ಮತ್ತು ಹನುಮೇಗೌಡ ಅವರಿಗೆ ಸೇರಿದ ತುರುಬೇವಿನ(ಹೆಬ್ಬೇವು) ಮರಗಳು ನೆಲಕ್ಕುರುಳಿವೆ.
ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರ ಜತೆಯಲ್ಲೇ ಬಿರುಗಾಳಿ ಬೀಸುತ್ತಿರುವುದರಿಂದ ಹಳೆಯ ಮರಗಳು ಬುಡಮೇಲಾಗುತ್ತಿವೆ. ಸೀಟಿನ ಮನೆಗಳ ಮೇಚ್ಚಾವಣಿಗಳು ಹಾರಿ ಹೋಗಿ ಭಾರಿ ನಷ್ಟವಾಗಿದೆ. ಉತ್ತಮ ಮಳೆಯಾಗುತ್ತಿರುವುದು ತಾಲ್ಲೂಕಿನ ಜನತೆಗೆ ಅತ್ಯಂತ ಖುಷಿ ತಂದುಕೊಟ್ಟಿದ್ದರೂ ಗಾಳಿಗೆ ಮನೆ ಮತ್ತು ಮರಗಳು ನಾಶವಾಗುತ್ತಿರುವುದು ನೆಮ್ಮದಿಯನ್ನು ಕೆಡಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.