ಆನೇಕಲ್ :ತಾಲ್ಲೂಕಿನ ಶಿಕಾರಿಪಾಳ್ಯದಲ್ಲಿ ಎರಡು ಕೋವಿಡ್ –19 ಪ್ರಕರಣ ಪತ್ತೆಯಾಗಿದೆ. ತಂದೆ ಮತ್ತು ಮಗನಿಗೆ ಸೋಂಕು ತಗುಲಿದೆ.
ರಾಜಸ್ಥಾನದ ಜೈಪುರಕ್ಕೆ ವ್ಯಾಪಾರಕ್ಕಾಗಿ ತೆರಳಿದ್ದ ಇವರು ಮೇ 14ರಂದು ಕಾರವಾರಕ್ಕೆ ರೈಲಿನಲ್ಲಿ ಬಂದು ಅಲ್ಲಿಂದ ಬೆಂಗಳೂರಿಗೆ ಬರಲು ಬಸ್ ಪ್ರಯಾಣ ಮಾಡಿದ್ದರು. ಉಲ್ಲಾಳ ಉಪನಗರದಲ್ಲಿ ತಂದೆ –ಮಗನನ್ನು ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಮುಗಿಸಿಕೊಂಡು ಶಿಕಾರಿಪಾಳ್ಯಕ್ಕೆ ಬಂದಿದ್ದರು. ಈಗ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಶಿಕಾರಿಪಾಳ್ಯವನ್ನು ಸೀಲ್ಡೌನ್ ಮಾಡಲಾಗಿದೆ. ಗ್ರಾಮದಲ್ಲಿ ರೋಗ ನಿರೋಧಕ ಸಿಂಪಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.