
ಪ್ರಜಾವಾಣಿ ವಾರ್ತೆಶಿರಾಳಕೊಪ್ಪ: ತಾಲ್ಲೂಕಿನ ಗಡಿಗ್ರಾಮ ಶಿರಿಹಳ್ಳಿಯಲ್ಲಿ ಬುಧವಾರ ಸುಜಲಾ ಯೋಜನೆ ಅಡಿಯಲ್ಲಿ ಜಿ.ಪಂ. ಸದಸ್ಯ ದಾನಿ ರುದ್ರಪ್ಪ ಕುರಿಗಳನ್ನು ವಿತರಿಸಿದರು.
ಪ.ಜಾ., ಪ.ಪಂ. ಸೇರಿದ ಜನರು ಆರ್ಥಿಕವಾಗಿ ಸದೃಢರಾಗಲು, ಸ್ವಾವಲಂಬನೆಯಿಂದ ಸ್ವಾಭಿಮಾನದ ಬದುಕು ಸಾಗಿಸಲು ಈ ಯೋಜನೆ ಸಹಕಾರಿ ಆಗಿದೆ ಎಂದ ಅವರು, ಕುರಿ ಮಾರಾಟ ಮಾಡಬಾರದು ಎಂದು ವಿನಂತಿಸಿದರು.
ಬಿಳಿಕಿ ಉಪ ಜಲಾನಯನ ವಿಭಾಗದಲ್ಲಿ ಪ.ಜಾತಿ., ಪ.ಪಂಗಡಗಳಿಗೆ ಸೇರಿದ 32 ಫಲಾನುಭವಿಗಳಿಗೆ, ಆದಾಯ ಉತ್ಪನ್ನಗಳಾಗಿ ತಲಾ 6 ಕುರಿ ನೀಡಲಾಯಿತು. ಫಲಾನುಭವಿಗಳಿಂದ ರೂ 6,386 ಮತ್ತು ಸರ್ಕಾರದ ರೂ 19,159 ಅನುದಾನದಲ್ಲಿ ಒಟ್ಟು ರೂ 25,545 ಮೊತ್ತದ, 5 ಹೆಣ್ಣು ಕುರಿ, 1 ಗಂಡು ಕುರಿ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.