ADVERTISEMENT

ಅಪಘಾತ: ಲಾರಿಯಡಿ ಸಿಲುಕಿ ಬದುಕುಳಿದ ಬೈಕ್ ಸವಾರರು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 3:14 IST
Last Updated 13 ಆಗಸ್ಟ್ 2022, 3:14 IST
ರಿಪ್ಪನ್‌ಪೇಟೆ ಸಿದ್ದಪ್ಪನ ಗುಡಿ ಬಳಿ ಲಾರಿ ಬೈಕ್ ನಡುವೆ ನಡೆದ ಅಪಘಾತ
ರಿಪ್ಪನ್‌ಪೇಟೆ ಸಿದ್ದಪ್ಪನ ಗುಡಿ ಬಳಿ ಲಾರಿ ಬೈಕ್ ನಡುವೆ ನಡೆದ ಅಪಘಾತ   

ರಿಪ್ಪನ್‌ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆಯ ಸಿದ್ದಪನಗುಡಿ ಬಳಿಶುಕ್ರವಾರ ಲಾರಿ ಹಾಗೂ ಬೈಕ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಲಾರಿಯಡಿ ಸಿಲುಕಿದರೂ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ.

ಗಾರೆ ಕೆಲಸಗಾರರಾದ ಆಯನೂರಿನ ಶ್ರೀನಿವಾಸ್ (29) ಮತ್ತು ಮಂಜುನಾಥ್ (28) ಸಣ್ಣಪುಟ್ಟ ಅಪಾಯದಿಂದ ಪಾರಾಗಿದ್ದಾರೆ.

ಆಯನೂರಿನಿಂದ ರಿಪ್ಪನ್‌ಪೇಟೆ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ರಿಪ್ಪನ್‌ಪೇಟೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಬೈಕ್ ಸವಾರರು ಲಾರಿ ಅಡಿಗೆ ಸಿಲುಕಿದ್ದರು. ಸ್ಥಳೀಯರ ನೆರವಿನಿಂದ ಅವರನ್ನು ಹೊರ ತೆಗೆಯಲಾಯಿತು. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ಶಿವಮೊಗ್ಗಕ್ಕೆ ತೆರಳುತಿದ್ದ ಕೆಎಸ್‌ಆರ್‌ಟಿಸಿ ಬಸ್ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಬಸ್‌ನ ಹಿಂಬದಿಗೆ ಗುದ್ದಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದ ಮರಕ್ಕೆ ತಾಗಿ ನಿಂತಿದೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.