ADVERTISEMENT

ಸಾಗರ: ಮಳೆಯಿಂದ ಮರ ಬಿದ್ದು ಅಡಿಕೆ ಗಿಡಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 15:27 IST
Last Updated 21 ಜುಲೈ 2023, 15:27 IST
ಸಾಗರ ತಾಲ್ಲೂಕಿನಲ್ಲಿ ಶುಕ್ರವಾರ ಹೆಚ್ಚಿನ ಮಳೆಯಾದ ಕಾರಣ ಯಲಗಳಲೆ ಗ್ರಾಮದ ಪರಶುರಾಮ ಅವರ ಅಡಿಕೆ ತೋಟದಲ್ಲಿನ ಗಿಡಗಳ ಮೇಲೆ ಮರ ಬಿದ್ದ ಪರಿಣಾಮ ಗಿಡಗಳು ನಾಶವಾಗಿವೆ
ಸಾಗರ ತಾಲ್ಲೂಕಿನಲ್ಲಿ ಶುಕ್ರವಾರ ಹೆಚ್ಚಿನ ಮಳೆಯಾದ ಕಾರಣ ಯಲಗಳಲೆ ಗ್ರಾಮದ ಪರಶುರಾಮ ಅವರ ಅಡಿಕೆ ತೋಟದಲ್ಲಿನ ಗಿಡಗಳ ಮೇಲೆ ಮರ ಬಿದ್ದ ಪರಿಣಾಮ ಗಿಡಗಳು ನಾಶವಾಗಿವೆ   

ಸಾಗರ: ತಾಲ್ಲೂಕಿನಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದ್ದು, ಕೆಲವೆಡೆ ಹಾನಿ ಸಂಭವಿಸಿದೆ. ಯಲಗಳಲೆ ಗ್ರಾಮದ ಪರಶುರಾಮ ಅವರ ಅಡಿಕೆ ತೋಟದಲ್ಲಿನ ಗಿಡಗಳ ಮೇಲೆ ಮರ ಬಿದ್ದ ಪರಿಣಾಮ ಗಿಡಗಳು ನಾಶವಾಗಿವೆ.

ಗಿಣಿವಾರ ಗ್ರಾಮದ ಬಸವರಾಜ ಅವರ ಮನೆಯ ಗೋಡೆ ಕುಸಿದು ನಷ್ಟ ಉಂಟಾಗಿದೆ. ಜೋಗದಲ್ಲಿ ಕೃಷ್ಣಮೂರ್ತಿ ಎಂಬುವವರ ಮನೆಯ ಗೋಡೆ ಕುಸಿದಿದ್ದು ಅಲ್ಲಿನ ವಸ್ತುಗಳಿಗೆ ಹಾನಿ ಉಂಟಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT