ಶಿವಮೊಗ್ಗ:ತಾಲೂಕಿನ ನುಗ್ಗಿ ಮಲ್ಲಾಪುರದಲ್ಲಿ ಬುಧವಾರ ರಾತ್ರಿ ಮೂವರು ವಿಷ ಸೇವಿಸಿಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಜ್ಞಾನಮೂರ್ತಿ (55),ಅವರ ಪುತ್ರಚನ್ನೇಶ್ (20)ಮೃತಪಟ್ಟವರು. ಪತ್ನಿ ರತ್ನಮ್ಮ (50) ಜೀನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಜ್ಞಾನಮೂರ್ತಿ ಮೊದಲ ಪತ್ನಿ ಶಂಕರಮ್ಮ ಅವರನ್ನು ತೊರೆದುರತ್ನಮ್ಮ ಅವರ ಜತೆ ಎರಡು ದಶಕಗಳ ಹಿಂದೆ ಮೈಸೂರಿಗೆ ತೆರಳಿದ್ದರು. ಅಲ್ಲೇ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದರು. ಬುಧವಾರ ಗ್ರಾಮಕ್ಕೆ ಬಂದಿದ್ದ ಅವರು ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ.
ಮೊದಲ ಪತ್ನಿ ಶಂಕ್ರಮ್ಮ ಮತ್ತು ಮಕ್ಕಳು ಆತ್ಮಹತ್ಯೆಯ ಕುರಿತುಶಂಕೆ ವ್ಯಕ್ತಪಡಿಸಿದ್ದಾರೆ. ಜ್ಞಾನಮೂರ್ತಿ ಆಸ್ತಿ ಪಡೆಯಲು ರತ್ನಮ್ಮ ಕುಟುಂಬ ಯತ್ನಿಸುತ್ತಿದೆ ಎಂದುಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.