ADVERTISEMENT

ಭದ್ರಾವತಿ: ಸಂಭ್ರಮದ ವೈಕುಂಠ ಏಕಾದಶಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 5:51 IST
Last Updated 14 ಜನವರಿ 2022, 5:51 IST
ಭದ್ರಾವತಿಯ ಸಿದ್ಧಾರೂಢನಗರ ಶ್ರೀನಿವಾಸ ದೇವಾಲಯದಲ್ಲಿ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು (ಎಡಚಿತ್ರ). ಮಿಲ್ಟ್ರಿಕ್ಯಾಂಪ್ ಶ್ರೀನಿವಾಸ ದೇವಾಲಯದಲ್ಲಿನ ರತ್ನಾಭರಣ ಅಲಂಕಾರ ಗಮನ ಸೆಳೆಯಿತು
ಭದ್ರಾವತಿಯ ಸಿದ್ಧಾರೂಢನಗರ ಶ್ರೀನಿವಾಸ ದೇವಾಲಯದಲ್ಲಿ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು (ಎಡಚಿತ್ರ). ಮಿಲ್ಟ್ರಿಕ್ಯಾಂಪ್ ಶ್ರೀನಿವಾಸ ದೇವಾಲಯದಲ್ಲಿನ ರತ್ನಾಭರಣ ಅಲಂಕಾರ ಗಮನ ಸೆಳೆಯಿತು   

ಭದ್ರಾವತಿ: ಕೊರೊನಾ ಆತಂಕದ ನಡುವೆಯೂ ಗುರುವಾರ ನಗರದ ಬಹುತೇಕ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಏಕಾದಶಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು.

ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಭೂ ವೈಕುಂಠನಾಥನ ದರ್ಶನದ ವಿಶೇಷ ಅಲಂಕಾರ ಕಂಡುಬಾರದಿದ್ದರೂ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀನಿವಾಸ ದೇವರ ಉತ್ಸವ ಮೂರ್ತಿಯ ಅಲಂಕಾರ ಗಮನ ಸೆಳೆಯಿತು.

ಬೆಳಗಿನ ಚಳಿಯನ್ನು ಲೆಕ್ಕಿಸದೆ ನೂರಾರು ಭಕ್ತರು ದೇವಾಲಯ ಪ್ರಾಂಗಣದಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ADVERTISEMENT

ಸಿದ್ಧಾರೂಢನಗರದ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ನಿಮಿತ್ತ ದೇವರಿಗೆ ಹೂವಿನಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಮಿಲ್ಟ್ರಿಕ್ಯಾಂಪ್‌ನ ಶ್ರೀನಿವಾಸ ದೇವರಿಗೆ ವಿಶೇಷ ರತ್ನಾಭರಣ ಅಲಂಕಾರ ಗಮನ ಸೆಳೆಯಿತು.

ಕಾಗದನಗರದ ನಾಗರಕಟ್ಟೆ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತರು ದರ್ಶನ ಪಡೆದರು.

ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು, ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.ಹಲವೆಡೆ ಜನರು ಅಂತರ ಕಾಯ್ದುಕೊಳ್ಳದೆಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.