ADVERTISEMENT

ಸೈಕಲ್‌ಗೆ ಬಸ್‌ ಡಿಕ್ಕಿ: ಪತ್ರಿಕಾ ವಿತರಕ ಸಾವು

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 14:25 IST
Last Updated 2 ಜುಲೈ 2022, 14:25 IST
ಗಣೇಶ್
ಗಣೇಶ್   

ಸಾಗರ: ನಗರದ ಪ್ರವಾಸಿ ಮಂದಿರದ ಎದುರು ಶನಿವಾರ ಬೆಳಗಿನ ಜಾವ ಸೈಕಲ್‌ಗೆಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪತ್ರಿಕಾ ವಿತರಕ, ‌‌‌ಬೆಳಲಮಕ್ಕಿ ಬಡಾವಣೆಯ ನಿವಾಸಿ ಗಣೇಶ್ (ಚೌಡ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

19 ವರ್ಷದ ಗಣೇಶ್ ಅವರು ಪತ್ರಿಕೆ ವಿತರಿಸಲು ತಮ್ಮ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನಿಂದ ಯಲ್ಲಾಪುರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಶನಿವಾರ ಅಂತ್ಯಕ್ರಿಯೆ ನಡೆಯಿತು.

ADVERTISEMENT

ಗಣೇಶ್ ಅವರು ಬೆಳಲಮಕ್ಕಿಯ ಸುರೇಶ್, ಉಮಾ ದಂಪತಿ ಏಕೈಕ ಪುತ್ರ. ಸುರೇಶ್ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಉಮಾ ಅವರು ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡುತ್ತಾರೆ. ಗಣೇಶ್ ಪತ್ರಿಕೆ ಹಂಚುವ ಮೂಲಕ ಬರುತ್ತಿದ್ದ ಆದಾಯದಿಂದ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ಗಣೇಶ್ ಅಕಾಲಿಕ ನಿಧನದಿಂದ ಅವರ ಕುಟುಂಬ ಕಂಗಾಲಾಗಿದೆ.

ಶ್ರದ್ಧಾಂಜಲಿ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖರು ಶನಿವಾರ ಸಭೆ ಸೇರಿ ಗಣೇಶ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ,ಅವರ ಕುಟುಂಬಕ್ಕೆ ಕಿರು ಧನಸಹಾಯ ನೀಡಿದರು. ಗದಗದಿಂದ ಬಂದಿದ್ದ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರಕುದರಿ ಮೋಟಿ ಗಣೇಶ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಧನಸಹಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.