ADVERTISEMENT

ತೀರ್ಥಹಳ್ಳಿ: ಗಂಟಲಿನಲ್ಲಿ ಅಡಿಕೆ ಸಿಲುಕಿ ಮಗು ಸಾವು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:17 IST
Last Updated 7 ಫೆಬ್ರುವರಿ 2021, 1:17 IST

ತೀರ್ಥಹಳ್ಳಿ: ತಾಲ್ಲೂಕಿನ ಹೆದ್ದೂರಿನಲ್ಲಿ ಶನಿವಾರ ಗಂಟಲಿನಲ್ಲಿ ಅಡಿಕೆ ಸಿಲುಕಿದ ಪರಿಣಾಮ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.

ಸಂದೇಶ–ಅರ್ಚನಾ ದಂಪತಿಯ ಮಗು ಶ್ರಿಯಾಂಶ (18 ತಿಂಗಳು) ಮೃತಪಟ್ಟಿರುವ ಮಗು. ಮನೆಯ ಮುಂಭಾಗ ಅಂಗಳದಲ್ಲಿ ಒಣಗಿಸಿಟ್ಟ ಅಡಿಕೆಯನ್ನು ಮಗು ಬಾಯಿಗೆ ಹಾಕಿಕೊಂಡಿತ್ತು. ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಮಗು ತೀವ್ರವಾಗಿ ಅಸ್ವಸ್ಥಗೊಂಡಿತು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT