ADVERTISEMENT

ಕೋವಿಡ್‌ ಸಲಕರಣೆ ಖರೀದಿಯಲ್ಲಿ ಅವ್ಯವಹಾರ: ಶಿವಮೊಗ್ಗೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಸಚಿವ ದ್ವಯರ ರಾಜೀನಾಮೆಗೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 14:19 IST
Last Updated 7 ಜುಲೈ 2020, 14:19 IST
ಎಚ್‌.ಎಸ್.ಸುಂದರೇಶ್
ಎಚ್‌.ಎಸ್.ಸುಂದರೇಶ್   

ಶಿವಮೊಗ್ಗ: ಕೋವಿಡ್‌ ಸಲಕರಣೆಗಳ ಖರೀದಿಯಲ್ಲಿ ವ್ಯಾಪಕ ಅವ್ಯವಹಾರನಡೆದಿದೆ. ಹಗರಣದಲ್ಲಿ ವೈದ್ಯಕೀಯ ಸಚಿವ ಡಾ.ಸುಧಾಕರ್‌, ಆರೋಗ್ಯ ಸಚಿವ ಶ್ರೀರಾಮುಲ್ ಅವರ ಕೈವಾಡವಿದೆ.ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ಜಿಲ್ಲಾ ಘಟಕದಅಧ್ಯಕ್ಷ ಎಚ್.ಎಸ್.ಸುಂದರೇಶ್ ಆಗ್ರಹಿಸಿದರು.

ಕೋವಿಡ್ ಉಪಕರಣಗಳ ಖರೀದಿಯಲ್ಲಿಕೋಟ್ಯಾಂತರ ರೂಪಾಯಿಭ್ರಷ್ಟಾಚಾರನಡೆದಿರುವುದನ್ನು ವಿಧಾನಸಭೆವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದಾಖಲೆಗಳ ಸಮೇತ ಬಹಿರಂಗ ಪಡಿಸಿದ್ದಾರೆ.ಈ ಕುರಿತು ಉನ್ನತಮಟ್ಟದ ತನಿಖೆ ನಡೆಸಬೇಕು.ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕುಎಂದು ಇದೇ ಮೊದಲ ಬಾರಿ ಆ್ಯಪ್‌ ಮೂಲಕ ನಡೆದ ವೀಡಿಯೊ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೋವಿಡ್-19 ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳುಸಂಪೂರ್ಣ ವಿಫಲವಾಗಿದೆ. ಜನರುಜೀವ ಕಳೆದುಕೊಳ್ಳುತ್ತಿದ್ದಾರೆ.ಸಮರ್ಪಕ ಕೋವಿಡ್‌ಉಪಕರಣಗಳು ಇಲ್ಲವಾಗಿವೆ. ಇಡೀ ರಾಜ್ಯದಲ್ಲಿ ಎಲ್ಲಿಯೂ ಉತ್ತಮ ಲ್ಯಾಬ್‌ಗಳುಇಲ್ಲ. ಪಿಪಿಇ ಕಿಟ್ ಇತರ ಸೌಲಭ್ಯಗಳ ಕೊತರೆ ಇದೆ. ಪ್ರಕರಣಗಳ ಸಂಖ್ಯೆ ನಿತ್ಯವೂ ಹೆಚ್ಚುತ್ತಲೇ ಇವೆ. ಕೇವಲ ಭಾವನಾತ್ಮಕ ವಿಷಯಗಳಿಂದಕೊರೊನಾ ಸೋಂಕುನಿಯಂತ್ರಿಸಲು ಸಾಧ್ಯವಿಲ್ಲ.ಇಂತಹ ಸಮುಯದಲ್ಲೂ ಸರ್ಕಾರಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆಎಂದು ಟೀಕಿಸಿದರು.

ADVERTISEMENT

ಪ್ರಧಾನ ಮಂತ್ರಿಗಳ ‘ಪಿಎಂ ಕೇರ್ ನಿಧಿಗೆ’ ಸಾವಿರಾರು ಕೋಟಿ ನೆರವು ಹರಿದುಬರುತ್ತಿದೆ. ಅಷ್ಟೊಂದುಹಣಬಳಸುವಲ್ಲಿ ಕೇಂದ್ರಸರ್ಕಾರಆಸಕ್ತಿ ತೋರುತ್ತಿಲ್ಲ. ಈ ನಿಧಿಯಿಂದ ರಾಜ್ಯಕ್ಕೆ ₨ 10 ಸಾವಿರ ಕೋಟಿ ನೀಡಬೇಕು. ಕೋವಿಡ್‌ನಿಯಂತ್ರಣಕ್ಕೆಕ್ರಮ ಕೈಗೊಳ್ಳಬೇಕುಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಮತ್ತೆ ಮತ್ತೆ ಬಂಡವಾಳ ಶಾಹಿಗಳ ಜತೆ ಕೈ ಜೋಡಿಸಿ, ಮಾನವೀಯತೆ ಮರೆಯುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಕೊರೊನಾ ಪರೀಕ್ಷೆಗೆ ಅವಕಾಶ ನೀಡಿರುವುದು ಆಸ್ಪತ್ರೆಗಳ ದುಬಾರಿ ಶುಲ್ಕ ವಸೂಲಿಗೆದಾರಿ ಮಾಡಿಕೊಟ್ಟಿದೆ.ಎಲ್ಲಾ ಕೋವಿಡ್ ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು. ಖಾಸಗಿ ಆಸ್ಪತ್ರೆಗಳ ಶುಲ್ಕ ಸರ್ಕಾರವೇಭರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.