ADVERTISEMENT

ಸರಳ ದಸರಾ; ಕೊರೊನಾ ವಾರಿಯರ್‌ಗಳಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 4:03 IST
Last Updated 8 ಅಕ್ಟೋಬರ್ 2020, 4:03 IST
ಸುವರ್ಣಾ ಶಂಕರ್
ಸುವರ್ಣಾ ಶಂಕರ್   

ಶಿವಮೊಗ್ಗ:ಕೋವಿಡ್‌ ಕಾರಣದಿಂದ ಈ ಬಾರಿ ದಸರಾಮಹೋತ್ಸವವನ್ನು ಅತ್ಯಂತಸರಳವಾಗಿ ಆಚರಿಸಲು ನಗರ ಪಾಲಿಕೆ ನಿರ್ಧರಿಸಿದೆ.

ಕೋಟೆ ರಸ್ತೆಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಅ.17ರಂದು ತಾಯಿ ಚಾಮುಂಡೇಶ್ವರಿ ದೇವಿಯನ್ನುಪಟ್ಟಕ್ಕೆ ಕೂರಿಸಲಾಗುವುದು.ಪೌರ ಕಾರ್ಮಿಕರು, ಆರೋಗ್ಯ ಇಲಾಖೆಯವೈದ್ಯರು, ಶುಶ್ರೂಷಕಿಯರು ಒಳಚರಂಡಿ ಸಿಬ್ಬಂದಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರುಎಂದು ಮೇಯರ್ ಸುವರ್ಣಾಶಂಕರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಈ ಬಾರಿ ಎರಡು ಸಮಿತಿಗಳನ್ನು ರಚಿಸಲಾಗಿದೆ.ಒಂದು ಸ್ವಾಗತಸಮಿತಿ ಮತ್ತೊಂದುಉತ್ಸವ ಸಮಿತಿ. ಈ ಸಮಿತಿಗೆಮೇಯರ್,ಅಲಂಕಾರ ಸಮಿತಿಗೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೀಶ್ ಅಧ್ಯಕ್ಷರಾಗಿರುತ್ತಾರೆ. ಪಾಲಿಕೆಯ ಎಲ್ಲ ಸದಸ್ಯರುಗಳು ಈ ಸಮಿತಿಗಳ ಸದಸ್ಯರಾಗಿರುತ್ತಾರೆ ಎಂದರು.

ADVERTISEMENT

26ರಂದು ವಿಜಯದಶಮಿ ಮೆರವಣಿಗೆ ಇರುವುದಿಲ್ಲ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ದೇವರು ಬನ್ನಿ ಮುಡಿಯುವ ಸ್ಥಳ ಹಳೇ ಜೈಲು ಆವರಣಕ್ಕೆನೇರವಾಗಿ ಕರೆ ತರುವಂತೆ ಮನವಿ ಮಾಡಲಾಗಿದೆ. ಖಾಸಗಿ ದೇವಾಲಯಗಳಈ ಬಾರಿ ಬನ್ನಿ ಮುಡಿಯವ ಸ್ಥಳಕ್ಕೆ ಬರುವುದಿಲ್ಲ ಎಂದರು.

ಪ್ರತಿ ವರ್ಷದಂತೆ ಎಲ್ಲ ದೇವಸ್ಥಾನಗಳ ಅಲಂಕಾರಕ್ಕಾಗಿ ಪಾಲಿಕೆಯಿಂದ ಧನಸಹಾಯ ನೀಡಲಾಗುವುದು. ನಗರದ ಎಲ್ಲೆಡೆ ದೀಪಾಲಂಕಾರ ಮಾಡಲಾಗುವುದು. ಸಾರ್ವಜನಿಕರಿಗೆ ಬನ್ನಿ ಮುಡಿಯುವ ಸ್ಥಳಕ್ಕೆ ಪ್ರವೇಶ ಇಲ್ಲಎಂದು ಮಾಹಿತಿ ನೀಡಿದರು.

ಕಳೆದ ವರ್ಷ ದಸರಾ ಆಚರಣೆಗೆ ₹ 1.63 ಕೋಟಿ ವೆಚ್ಚ ಮಾಡಲಾಗಿತ್ತು. ಈ ಬಾರಿ ₹ 38ಲಕ್ಷ ತೆಗೆದಿರಿಸಲಾಗಿದೆ. ಮಿತ ವ್ಯಯದಲ್ಲೇ ಎಲ್ಲಕಾರ್ಯಕ್ರಮ ನೆರವೇರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಸುರೇಖಾ ಮುರಳೀಧರ್, ಸದಸ್ಯರಾದಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಇ.ವಿಶ್ವಾಸ್, ಯು.ಎಚ್.ವಿಶ್ವನಾಥ್, ಕೆ.ಟಿ.ಶ್ರೀನಿವಾಸ್, ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.