ADVERTISEMENT

ಕೊರೊನಾ ವಿರುದ್ಧ ಚಿತ್ರ ಬರಹದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 13:32 IST
Last Updated 30 ಮಾರ್ಚ್ 2020, 13:32 IST
ಶಿವಮೊಗ್ಗದಲ್ಲಿ ಸೋಮವಾರ ಕುಂಚ ಕಲಾವಿದರು, ಜಿಲ್ಲಾ ಪೊಲೀಸರ ಸಹಯೋಗದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಚಿತ್ರ ಬರಹದ ಮೂಲಕ ಕರೊನಾ ಜಾಗೃತಿ ಮೂಡಿಸಿದರು.
ಶಿವಮೊಗ್ಗದಲ್ಲಿ ಸೋಮವಾರ ಕುಂಚ ಕಲಾವಿದರು, ಜಿಲ್ಲಾ ಪೊಲೀಸರ ಸಹಯೋಗದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಚಿತ್ರ ಬರಹದ ಮೂಲಕ ಕರೊನಾ ಜಾಗೃತಿ ಮೂಡಿಸಿದರು.   

ಶಿವಮೊಗ್ಗ: ಕೊರೊನಾ ನಿರ್ಬಂಧಗಳ ಮಧ್ಯೆಯೂ ಬೀದಿಗಿಳಿದು ಓಡಾಡುವ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ನಾನಾ ತಂತ್ರಗಳ ಮೊರೆ ಹೋಗಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ದೊಡ್ಡದಾಗಿ ‘ಬೀದಿಗೆ ಬಂದರೆನೀನು, ನಿಮ್ಮ ಮನೆಗೆ ಬರುವೆ ನಾನು’ ಎಂಬ ಬರಹ, ಮಾಸ್ಕ್‌ ಧರಿಸಿ, ಅಗತ್ಯ ವಸ್ತು ಖರೀದಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಬರಹಗಳು ಎಲ್ಲೆಡೆ ಕಾಣುತ್ತಿವೆ.

ಜಿಲ್ಲಾ ಪೊಲೀಸರ ಸಹಯೋಗದಲ್ಲಿ ಕುಂಚ ಕಲಾವಿದರು ನಗರದ ಪ್ರಮುಖ ವೃತ್ತ, ರಸ್ತೆಗಲ್ಲಿ ಇಂತಹ ಚಿತ್ರ ಬರಹದ ಮೂಲಕ ಕರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಹಲವೆಡೆ ಫ್ಲೆಕ್ಸ್ ಜಾಕುವ ಮೂಲಕವೂ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.