ADVERTISEMENT

ಕಾಣೆಯಾಗಿದ್ದ ಆಕರ್ಷ ರಾಜ್ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:02 IST
Last Updated 6 ಜುಲೈ 2022, 4:02 IST
ಆಕರ್ಷ ರಾಜ್
ಆಕರ್ಷ ರಾಜ್   

ತೀರ್ಥಹಳ್ಳಿ: ಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೇಗದ್ದೆ ಗ್ರಾಮದ ಆಕರ್ಷ ರಾಜ್ (26) ಸಮೀಪದ ದುರ್ಗಾ ಕ್ರಾಸ್ ಕೆರೆಯಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

ಬಿಇ ಪದವೀದರ ಆಕರ್ಷ ರಾಜ್‌ ಗುತ್ತಿಗೆ ವೃತ್ತಿ ನಿರ್ವಹಿಸುತ್ತಿದ್ದರು. ಭಾನುವಾರ ಸಂಜೆ ಕವಲೇದುರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಕಾರು ವಿದ್ಯುತ್ ಕಂಬಕ್ಕೆ ತಗಲಿ ಅಪಘಾತವಾಗಿತ್ತು. ಅದೇ ದಿನ ಸಂಜೆಯಿಂದ ಕಾಣೆಯಾಗಿದ್ದರು. ಮಂಗಳವಾರ ಅವರ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಕರ್ಷ ರಾಜ್ ಬಿಜೆಪಿ ಮುಖಂಡ ಕಟ್ಟೇಗದ್ದೆ ಹಾಲಪ್ಪ ಅವರ ದ್ವಿತೀಯ ಪುತ್ರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.