ಶಿವಮೊಗ್ಗ: ಪತ್ನಿಯ ಶೀಲ ಶಂಕಿಸಿದ ಪತಿ ಅಡುಗೆ ಅನಿಲದ ಸಿಲಿಂಡರ್ನಿಂದ ತಲೆಗೆ ಹೊಡೆದು ಶನಿವಾರ ಕೊಲೆ ಮಾಡಿದ್ದಾನೆ.
ಬೊಮ್ಮನಕಟ್ಟೆಯ ‘ಸಿ’ ಬ್ಲಾಕ್ನ ಮಾಲಾ (26) ಕೊಲೆಯಾದ ಮಹಿಳೆ.ಮಂಜುನಾಥ್ ಕೃತ್ಯ ಎಸಗಿದ ಆರೋಪಿ.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಂಸಾರದಲ್ಲಿನ ಭಿನ್ನಾಭಿಪ್ರಾಯದಿಂದ ಇಬ್ಬರೂ ದೂರ ಇದ್ದರು. ಶುಕ್ರವಾರ ಮನೆಗೆ ಬಂದಿದ್ದು, ಬೆಳಗಿನ ಜಾವದವರೆಗೂ ಇಬ್ಬರ ಮಧ್ಯೆ ಜಗಳ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ. ನಂತರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.