ADVERTISEMENT

ಸಕ್ರೆಬೈಲು: ಮರಿಯಾನೆ ಭಾರತಿ ಸಾವು

​ಪ್ರಜಾವಾಣಿ ವಾರ್ತೆ
Published 25 ಮೇ 2019, 11:40 IST
Last Updated 25 ಮೇ 2019, 11:40 IST
ಸಕ್ರೆಬೈಲಿನಲ್ಲಿ ಶನಿವಾರ ಮೃತಪಟ್ಟ ಆನೆ ಭಾರತಿ.
ಸಕ್ರೆಬೈಲಿನಲ್ಲಿ ಶನಿವಾರ ಮೃತಪಟ್ಟ ಆನೆ ಭಾರತಿ.   

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಒಂದೂವರೆ ವರ್ಷದ ಹೆಣ್ಣು ಮರಿಯಾನೆ ಶನಿವಾರ ಮೃತಪಟ್ಟಿದೆ.

ಭಾರತಿ ಹೆಸರಿನ ಈ ಕಾಡನೆಯನ್ನು ತಾಯಿ ಭಾನುಮತಿ ಜತೆ ಹಾಸನ ಜಿಲ್ಲೆ ಸಕಲೇಶಪುರದ ಬಳಿ ಸೆರೆಹಿಡಿದ ನಂತರ ಪಳಗಿಸಲು ಸಕ್ರೆಬೈಲು ಆನೆ ಬಿಡಾರದಲ್ಲಿ ಇರಿಸಲಾಗಿತ್ತು. ನಿತ್ಯದಂತೆ ಮೇ 24ರಂದು ಮಾವುತರು ಸ್ನಾನ ಮಾಡಿಸಿ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದರು. 25ರ ಬೆಳಿಗ್ಗೆ ಸ್ನಾನ ಮಾಡಿಸಲು ಕರೆದುಕೊಂಡು ಬರಲು ಹೋದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆನೆಗೆ ವನ್ಯಜೀವಿ ವಿಭಾಗದ ವೈದ್ಯರು ನಿಯಮಿತವಾಗಿ ಚಿಕಿತ್ಸೆ ನೀಡುತ್ತಿದ್ದರು. ಶುಕ್ರವಾರ ರಾತ್ರಿ ಅರಣ್ಯದ ಮೂರನೇ ಗುಡ್ಡದ ಬಳಿ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಭಾಗದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.