ADVERTISEMENT

ಸಾಕಾನೆ ದಾಳಿ: ವೈದ್ಯ ಪಾರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 2:03 IST
Last Updated 5 ಏಪ್ರಿಲ್ 2021, 2:03 IST

ಶಿವಮೊಗ್ಗ: ಸಕ್ರೆಬೈಲಿನ ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ಭಾನುವಾರ ಆನೆಯೊಂದು ದಾಳಿ ನಡೆಸಿದ್ದು, ಅನಾಹುತದಿಂದ ಡಾ.ವಿನಯ್ ಪಾರಾಗಿದ್ದಾರೆ.

ಎರಡು ದಿನಗಳ ಹಿಂದೆ ಆನೆ ಬಿಡಾರದಲ್ಲಿನೀಲಾಂಬರಿ ಆನೆಯು ಮರಿಗೆ ಜನ್ಮ ನೀಡಿತ್ತು. ತಾಯಿ ಹಾಗೂ ಮರಿಯಾನೆಯ ಔಷಧೋಪಚಾರಕ್ಕೆ ತೆರಳಿದ್ದ ವೈದ್ಯ ವಿನಯ್ ಅವರಿಗೆ ನೀಲಾಂಬರಿ ಆನೆ ಸೊಂಡಿಲಿನಿಂದ ತಿವಿದಿದೆ. ತಿವಿತದಿಂದ ವಿನಯ್ ಅವರ ಎರಡು ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.

ಹೆಚ್ಚಿನ ತರಬೇತಿ ಮತ್ತು ಆರೈಕೆಗಾಗಿ ನೀಲಾಂಬರಿ ಆನೆಯನ್ನು ಚಿತ್ರದುರ್ಗದ ಮುರುಘಾ ಮಠ ದಿಂದ ಸಕ್ರೆಬೈಲು ಆನೆ ಬಿಡಾರಕ್ಕೆ ಈಚೆಗೆ ಕರೆತರಲಾಗಿತ್ತು. ಆನೆ ಮೊದಲಿನಿಂದಲೂ ಆಕ್ರಮಣ ಕಾರಿ ಸ್ವಭಾವ ಹೊಂದಿದ್ದು, ಯಾವಾಗಲೂ ಮಾವುತ ಜೊತೆ ಗಿರಬೇಕಾದ ಅನಿವಾರ್ಯ ಎದುರಾ ಗಿದೆ. ದಾಳಿ ವೇಳೆ ಮಾವುತ ಸ್ಥಳದಲ್ಲಿ ಇರಲಿಲ್ಲ ಎಂದು ಡಾ.ವಿನಯ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.