ರಿಪ್ಪನ್ಪೇಟೆ: ಸಮೀಪದ ಮಸರೂರು ವೀರಣ್ಣನ ಕೆರೆಯಲ್ಲಿ ಶುಕ್ರವಾರ ಬಲೆಹಾಕಿ ಮೀನು ಹಿಡಿಯಲಾಯಿತು. ಮೀನು ಶಿಕಾರಿ ಸುದ್ದಿ ತಿಳಿದ ಜನರು ತಾಜಾ ಮೀನಿಗೆ ಮುಗಿಬಿದ್ದರು.
ಮೀನುಗಾರರು ತಾಜಾ ಗೌರಿ ಮೀನುಗಳನ್ನು ಕೆ.ಜಿಗೆ ₹ 160 ರಂತೆ ಮಾರಾಟ ಮಾಡಿದರು. 1 ಗಂಟೆ ಅವಧಿಯಲ್ಲಿ 3 ಕ್ವಿಂಟಲ್ಗೂ ಅಧಿಕ ಮೀನು ಬಿಕರಿಯಾದವು. ಜೀವಂತ ಮೀನು ಖರೀದಿಸಬೇಕೆಂದು ಬಂದಿದ್ದ ಕೆಲವರು ಮೀನು ಸಿಗದೆ ನಿರಾಸೆಯಿಂದ ಮರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.