ಕಾರ್ಗಲ್: ಇಲ್ಲಿನ ಮಹಾತ್ಮ ಗಾಂಧಿ ವಿದ್ಯುದಾಗಾರದ ಬಳಿ ಇರುವ ಎಮ್ಮಲಗ ಗುಂಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ನೀರು ಪಾಲಾಗಿದ್ದಾನೆ.
ಹಾವೇರಿ ಮೂಲದ ಗಣೇಶ ಬಂಡಸಿದ್ದಣ್ಣನವರ್ (21) ಮೃತ ಯುವಕ.
ಸೇತುವೆಕಾಮಗಾರಿಯ ಗಾರೆ ಕೆಲಸ ಮುಗಿಸಿದ ನಂತರ ಸ್ನಾನಕ್ಕೆ ಬಂದಿದ್ದಾರೆ. ಆ ಸಮಯದಲ್ಲಿ ಸ್ನೇಹಿತರ ಜತೆ ಸೆಲ್ಫಿ ತೆಗೆದುಕೊಳ್ಳುವಾಗ ಅವಘಡ ನಡೆದಿದೆ. ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.