ಭದ್ರಾವತಿ: ತೆಂಗಿನಕಾಯಿ ಕೀಳಲು ಹೋದ ಕಾರ್ಮಿಕರೊಬ್ಬರು ಕಡಜ (ಕಣಜ) ದಾಳಿಯಿಂದ ಸೋಮವಾರ ಮೃತಪಟ್ಟಿದ್ದಾರೆ.
ಕೆಂಚಮ್ಮನಹಳ್ಳಿ ರಂಗಪ್ಪ ಎಂಬುವವರ ತೋಟದಲ್ಲಿ ಕಾಯಿ ಕೀಳುತ್ತಿದ್ದ ಕಾರ್ಮಿಕ ಉಕ್ಕುಂದ ಕುಮಾರ (45) ಮೃತಪಟ್ಟವರು.
ಭಾನುವಾರ ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಆಕಸ್ಮಿಕವಾಗಿ ಕಡಜದ ಗೂಡಿಗೆ ಕೈ ಹಾಕಿದ್ದರು. ದೊಡ್ಡ ಕಡಜಗಳು ಗುಂಪಾಗಿ ಬಂದು ಕಚ್ಚಿದ್ದರಿಂದ ತೀವ್ರವಾಗಿ ಗಾಯ
ಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.