ಶಿವಮೊಗ್ಗ: ರೌಡಿಶೀಟರ್ ಮಾರ್ಕೆಟ್ ಗೋವಿಂದ್ ಅವರನ್ನು ಗಾರ್ಡನ್ ಏರಿಯಾದ ಸವಾರ್ ಲೈನ್ರಸ್ತೆಯಲ್ಲಿಬುಧವಾರಸಂಜೆ ಮಾರಕಾಸ್ತ್ರಗಳಿಂದ ಹಲ್ಲೆನಡೆಸಿ,ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈತ ದುರ್ಗಿಗುಡಿ ಬಳಿ ಈಚೆಗೆ ಹತ್ಯೆಯಾದ ಮಾರ್ಕೆಟ್ ಗಿರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ. ಕೊಲೆಯ ನಂತರ ತಲೆಮರೆಸಿಕೊಂಡಿದ್ದ. ಮೂರು ಕೊಲೆ ಪ್ರಕರಣ, ಒಂದು ಕೋಕಾ ಪ್ರಕರಣ ಆತನ ಮೇಲಿತ್ತು.ಪೊಲೀಸರ ಕಣ್ಣು ತಪ್ಪಿಸಿ ಬಂದು ಹೋಗುತ್ತಿದ್ದ ಗೋವಿಂದ್ ಮಾಹಿತಿ ಪಡೆದ ಗಿರಿ ಹುಡುಗರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಟಿವಿಎಸ್ನಲ್ಲಿ ಹೆಲ್ಮೆಟ್ ಧರಿಸಿ 7.30ರ ಸುಮಾರಿಗೆ ಬರುತ್ತಿದ್ದ ಆತನನ್ನು ಮಾರುತಿ ಒಮ್ನಿಯಲ್ಲಿ ಬಂದ ಗುಂಪು ಗೌರವ್ ಲಾಡ್ಜ್ ಎದುರು ಮಾರಾಕಾಸ್ರಗಳಿಂದ ಮನಸ್ಸಿಗೆ ಬಂದಂತೆ ಕೊಚ್ಚಿದ್ದಾರೆ.ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈತನ ಸಹೋದರ ಲೋಕೇಶ್ ಮೇಲೂ ಮೂರು ಕೊಲೆ ಪ್ರಕರಣಗಳಿವೆ. ಆತನೂತಲೆಮರೆಸಿಕೊಂಡಿದ್ದಾನೆ. ಹೂವಿನ ಮಾರುಕಟ್ಟೆ ವಿಚಾರಕ್ಕೆ ಲೋಕೆಶ್ ಸಹೋದರ ತುಳಸಿರಾಮ್ ಹತ್ಯೆಯಿಂದ ಆರಂಭವಾದಪರಸ್ಪರಪ್ರತೀಕಾರಕ್ಕೆ ಇದುವರೆಗೆ ಐವರು ಬಲಿಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.