ADVERTISEMENT

ಶಿವಮೊಗ್ಗ: ನವ ವಿವಾಹಿತೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 7:25 IST
Last Updated 7 ನವೆಂಬರ್ 2022, 7:25 IST
ನವ್ಯಶ್ರೀ
ನವ್ಯಶ್ರೀ   

ಶಿವಮೊಗ್ಗ: ಇಲ್ಲಿನ ಹೊಮ್ಮರಡಿ ನರ್ಸಿಂಗ್ ಹೋಂನ ಸಂಸ್ಥಾಪಕರಾದ ಡಾ.ಜಯಶ್ರೀ ಅವರ ಸೊಸೆ ನವ್ಯಶ್ರೀ (23) ಮನೆಯ ಕಾರ್‌ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐದುವರೆ ತಿಂಗಳ ಹಿಂದಷ್ಟೇ ಡಾ.ಜಯಶ್ರೀ ಅವರ ಪುತ್ರ ಆಕಾಶ್‌ ಅವರೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ನವ್ಯಶ್ರೀ ಮದುವೆಯಾಗಿದ್ದರು.

‘ಮಗಳ ಆತ್ಮಹತ್ಯೆಗೆ ಪತಿಯ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ಆತನ ದುರ್ನಡೆತೆಯೇ ಕಾರಣ’ ಎಂದು ಮೃತಳ ಪಾಲಕರು ಆರೋಪಿ ಸಿದ್ದಾರೆ. ‘ಆಕಾಶ್‌ ತಡರಾತ್ರಿ ಮನೆಗೆ ಬರುತ್ತಿದ್ದರು ಮತ್ತು ಅವರ ಮದ್ಯವ್ಯಸನದಿಂದ ಮಗಳು ಬೇಸತ್ತಿದ್ದಳು. ಈ ಬಗ್ಗೆ ಮಗಳು ದೂರವಾಣಿ ಕರೆಯಲ್ಲಿ ತಿಳಿಸಿದ್ದಳು’ ಎಂದುತಾಯಿ ನಳಿನಿದೂರಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.