ADVERTISEMENT

ರಘುನಾಥ ಗುರೂಜಿ ನಿಧನ

ನಿಧನವಾರ್ತೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 21:19 IST
Last Updated 1 ಸೆಪ್ಟೆಂಬರ್ 2022, 21:19 IST
ಟೆಂಪಲ್ ಆಫ್ ಸಕ್ಸಸ್ ನ ಸಂಸ್ಥಾಪಕ ರಘುನಾಥ ಗುರೂಜಿ ಅವರ ಭಾವಚಿತ್ರ
ಟೆಂಪಲ್ ಆಫ್ ಸಕ್ಸಸ್ ನ ಸಂಸ್ಥಾಪಕ ರಘುನಾಥ ಗುರೂಜಿ ಅವರ ಭಾವಚಿತ್ರ   

ರಿಪ್ಪನ್‌ಪೇಟೆ: ‘ಟೆಂಪಲ್ ಆಫ್ ಸಕ್ಸಸ್‌’ ಆಶ್ರಮದ ಸಂಸ್ಥಾಪಕ ಸಾಯಿದತ್ತ ರಘುನಾಥ್ ಗುರೂಜಿ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಿಧನರಾದರು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಮೂಗೂಡ್ತಿ ಗ್ರಾಮದ ಶಾಮರಾಯ ಅವರ ಇಬ್ಬರು ಪುತ್ರರಲ್ಲಿ ಹಿರಿಯರಾದ ಗುರೂಜಿ ಅವರ ಅಂತ್ಯಕ್ರಿಯೆ ಶುಕ್ರವಾರ ಮಣಿಪಾಲದಲ್ಲಿ ನಡೆಯಲಿದೆ.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಗುರೂಜಿಯವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಬಸವನಗುಡಿಯ ವಾಣಿವಿಲಾಸ ರಸ್ತೆಯಲ್ಲಿರುವ ‘ಟೆಂಪಲ್ ಆಫ್ ಸಕ್ಸಸ್‌’ ಆಶ್ರಮದ ಆವರಣದಲ್ಲಿ ಗುರುವಾರ ಭಕ್ತರ ದರ್ಶನಕ್ಕೆ ಇಡಲಾಗಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ADVERTISEMENT

ಪ್ರಮುಖ ರಾಜಕಾರಣಿಗಳಿಗೆ ವಾಟರ್ ಥೆರಪಿ ಮೂಲಕ ಚಿಕಿತ್ಸೆ ನೀಡಿದ್ದ ಗುರೂಜಿ, ‘ಅಮೃತ್ ಚಿಕಿತ್ಸೆ’ ಹೆಸರಲ್ಲಿ ಪುರಾತನ ಚಿಕಿತ್ಸಾ ಪದ್ಧತಿಯ ಪುನರುಜ್ಜೀವನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.