ADVERTISEMENT

ಶಿವಮೊಗ್ಗ | ಸರಸ್ವತಿ ಸ್ವಾಮೀಜಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 16:50 IST
Last Updated 19 ಜೂನ್ 2020, 16:50 IST

ಶಿವಮೊಗ್ಗ:ಕಲ್ಲು ಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ಸರಸ್ವತಿ ಸ್ವಾಮೀಜಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

52 ವರ್ಷದ ಸ್ವಾಮೀಜಿ ಕೋವಿಡ್ ರೋಗಿಯಾಗಿ ಇಲ್ಲಿನ ಮೆಗ್ಗಾನ್ ಅಸ್ಪತ್ರೆಗೆ ದಾಖಲಾದ ನಂತರ ಆಯುರ್ವೇದ ಚಿಕಿತ್ಸೆ ನೀಡುವಂತೆ ಪಟ್ಟು ಹಿಡಿದಿದ್ದರು. ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದರು. ಅವರ ಕೋರಿಕೆಯಂತೆ ಆಯುಷ್ ವೈದ್ಯರು ಜೀವರಕ್ಷಕ ಔಷಧ ನೀಡಿದ್ದರು.

‘ಆಯುರ್ವೆದ ಚಿಕಿತ್ಸೆಯ ಫಲವಾಗಿಯೇ ಕೊರೊನಾ ಸೋಂಕಿನಿಂದ ಬೇಗನೆ ಗುಣಮುಖನಾಗಿದ್ದೇನೆ’ ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.