ADVERTISEMENT

ಮಸೂದೆಗೆ ಸ್ವಾಗತ: ಗೋವುಗಳಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 5:19 IST
Last Updated 12 ಡಿಸೆಂಬರ್ 2020, 5:19 IST
ಸಚಿವ ಬಿ.ಎ.ಬಸವರಾಜ ಅವರು ಗೋವುಗಳಿಗೆ ಆಹಾರ ನೀಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರು ಉತ್ತರ ವಿಭಾಗದ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಾಕ್ಸರ್ ಎನ್.ನಾಗರಾಜ, ಮುಖಂಡರಾದ ಕಲ್ಕೆರೆ ಕೃಷ್ಣಮೂರ್ತಿ, ಜಗದೀಶ್, ಜಯರಾಂ, ಪೂಣಚ್ಚ, ಲಕ್ಷ್ಮೀಪತಿ, ರಾಮಚಂದ್ರಪ್ಪ, ಶ್ರೀನಿವಾಸ, ದೇವರಾಜ ಹಾಗೂ ಇತರರು ಇದ್ದರು.
ಸಚಿವ ಬಿ.ಎ.ಬಸವರಾಜ ಅವರು ಗೋವುಗಳಿಗೆ ಆಹಾರ ನೀಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರು ಉತ್ತರ ವಿಭಾಗದ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಾಕ್ಸರ್ ಎನ್.ನಾಗರಾಜ, ಮುಖಂಡರಾದ ಕಲ್ಕೆರೆ ಕೃಷ್ಣಮೂರ್ತಿ, ಜಗದೀಶ್, ಜಯರಾಂ, ಪೂಣಚ್ಚ, ಲಕ್ಷ್ಮೀಪತಿ, ರಾಮಚಂದ್ರಪ್ಪ, ಶ್ರೀನಿವಾಸ, ದೇವರಾಜ ಹಾಗೂ ಇತರರು ಇದ್ದರು.   

ಕೆ.ಆರ್.ಪುರ: ಸದನದಲ್ಲಿ ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಸ್ವಾಗತಿಸಿ, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಕೆ.ಆರ್.ಪುರದ ಯರ್ರಯ್ಯನಪಾಳ್ಯದ ಕೋಡಂದರಾಮ ಸ್ವಾಮಿ ದೇವಾಲಯದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿ,'ದೇಶದಲ್ಲಿ ಅನಾದಿ ಕಾಲದಿಂದಲೂ ಗೋವುಗಳನ್ನು ಅತ್ಯಂತ ಗೌರವದಿಂದ ಪೂಜಿಸಲಾಗುತ್ತಿದೆ. ಗೋಮಾತೆ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾಗಿದ್ದು ಸಂತಸ ತಂದಿದೆ. ಕ್ಷೇತ್ರದ ಪ್ರತಿ ವಾರ್ಡ್ ಗಳಲ್ಲಿ ಗೋಪೂಜೆ ಮೂಲಕ ಜನ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ' ಎಂದರು.

'ಜೀವನ ನಿರ್ವಹಣೆಗೆ ಹೆಚ್ಚಿನ ಕುಟುಂಬಗಳು ಗೋವುಗಳ ಮೇಲೆ ಅವಲಂಬಿಸಿವೆ. ದೇಶದ ಪ್ರತಿಯೊಬ್ಬ ಗೋವನ್ನು ಪೂಜನೀಯ ಭಾವನೆಯಿಂದ ನೋಡುವ ಪ್ರವೃತ್ತಿ ಇದೆ. ಇಂತಹ ಹೆಮ್ಮೆ ತರುವ ಮಸೂದೆಗೆ ಬಹುಮತ ಸಿಕ್ಕಿದೆ. ಹಸುಗಳ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲು ಸರ್ಕಾರ ನಿರ್ಣಯಿಸಿದೆ. ಅವುಗಳನ್ನು ಸರ್ಕಾರವೇ ನಿರ್ವಹಣೆ ಮಾಡಲು ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಬದ್ದರಾಗಿದ್ದೇವೆ' ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.