ADVERTISEMENT

ಅಭಿವೃದ್ಧಿಗೆ ಹಣವಿಲ್ಲ: ಶಾಸಕ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 5:58 IST
Last Updated 18 ಸೆಪ್ಟೆಂಬರ್ 2013, 5:58 IST

ತುರುವೇಕೆರೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಯೋಜನೆ ಹಮ್ಮಿ­­ಕೊಂಡಿಲ್ಲ. ಶಾಸಕರ ನಿಧಿ­ಯನ್ನೇ ಬಿಡುಗಡೆ ಮಾಡದ ಕಾರಣ ಕ್ಷೇತ್ರಗಳಲ್ಲಿ ನಯಾಪೈಸೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕಳೆದೊಂದು ವಾರದಿಂದ ಮಳೆ­ಯಾಗಿ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಸಿಎಂಜಿಎಸ್ವೈ ಹಾಗೂ ಸುವರ್ಣ ಗ್ರಾಮ ಯೋಜನೆಯಡಿ ಸರ್ಕಾರ ಹಣ ಬಿಡು­ಗಡೆ ಮಾಡಿಲ್ಲ. ಹೀಗಾಗಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದರು.

ಕಾಂಗ್ರೆಸ್ ಮುಖಂ­ಡರು ವರ್ಗಾವಣೆ ದಲ್ಲಾಳಿಗಳಂತೆ ವರ್ತಿಸುತ್ತಿ­ದ್ದಾರೆ. ಸೆಪ್ಟೆಂಬರ್ ಮುಗಿಯುತ್ತಾ ಬಂದರೂ ಅಧಿಕಾರಿಗಳ ವರ್ಗಾವಣೆ ನಿಂತಿಲ್ಲ. ಅಧಿಕಾರಿಗಳನ್ನು ಅಮಾ­ನವೀಯ­ವಾಗಿ ನಡೆಸಿ­ಕೊಳ್ಳಲಾ­ಗುತ್ತಿದೆ ಎಂದು ಆರೋಪಿಸಿದರು. 

ಸ್ಥಳಿಯ ರೈತರು ಬೆಳೆದ ಅಕ್ಕಿ ಕೆಜಿಗೆ `18ರಂತೆ ಲಭ್ಯವಿದೆ. ಆದರೆ ಸರ್ಕಾರ ದೂರದ ಒಡಿಶಾದಿಂದ ಕೆಜಿಗೆ ` 25ರ ದರದಲ್ಲಿ ಅಕ್ಕಿ ಕೊಳ್ಳುತ್ತಿದೆ. ಇದರಿಂದ ಸುಮಾರು ರೂ.500 ಕೋಟಿಯಷ್ಟು ಆದಾಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ವಿಶ್ಲೇಷಿಸಿದರು.
ಮುಖಂಡರಾದ ಎನ್.ಆರ್.­ಸುರೇಶ್, ಜಫ್ರುಲ್ಲಾ, ಹಿರಣ್ಣಯ್ಯ ಇತರರು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.