ADVERTISEMENT

ಆಗ್ರಾ ಪೊಲೀಸರಿಗೆ ಬಾಲಕಿ ಹಸ್ತಾಂತರಿಸಿದ ರೈಲ್ವೆ ಪೊಲೀಸ್

​ಪ್ರಜಾವಾಣಿ ವಾರ್ತೆ
Published 9 ಮೇ 2018, 11:38 IST
Last Updated 9 ಮೇ 2018, 11:38 IST

ತುಮಕೂರು: ಉತ್ತರ ಪ್ರದೇಶ ಆಗ್ರಾದಿಂದ ಬಾಲಕಿಯನ್ನು ಅಪಹರಿಸಿಕೊಂಡು ಬಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ 23 ವರ್ಷದ ಆರೋಪಿ ಅಜಯ್ ಹಾಗೂ 17 ವರ್ಷದ ಬಾಲಕಿಯನ್ನು ನಗರದ ರೈಲ್ವೆ ಪೊಲೀಸರು ಕ್ಯಾತ್ಸಂದ್ರ ರೈಲ್ವೆ ಸ್ಟೇಷನ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಂಗಳವಾರ ಆಗ್ರಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

‘ಮೇ 2ರಂದು ಬಾಲಕಿಯನ್ನು ಅಪಹರಿಸಿದ ಬಗ್ಗೆ ಆಗ್ರಾ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಕ್ಯಾತ್ಸಂದ್ರ ಠಾಣೆಯಲ್ಲಿ ಮೇ 5ರಂದು ಅನುಮಾನಾಸ್ಪದವಾಗಿ ಕಂಡು ಬಂದ ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಇಬ್ಬರೂ ಮನೆ ಬಿಟ್ಟು ಬಂದಿರುವುದಾಗಿ ಹೇಳಿದ್ದರು ಎಂದು ಆರ್‌ಪಿಎಫ್‌ ಸಬ್ ಇನ್‌ಸ್ಪೆಕ್ಟರ್ ಕುಬೇರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಗ್ರಾ ಠಾಣೆಗೆ ಮಾಹಿತಿ ನೀಡಿದ್ದೆವು. ಅಲ್ಲಿ ಅಪಹರಣ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಬಂದು ವಶಕ್ಕೆ ಪಡೆಯುವವರೆಗೂ ತಮ್ಮ ವಶದಲ್ಲಿಯೇ ಇರಲಿ ಎಂದು ಹೇಳಿದ್ದರು’ ಎಂದು ಹೇಳಿದರು.

ADVERTISEMENT

‘ಬಾಲಕಿಯನ್ನು ಮಕ್ಕಳ ಸಂರಕ್ಷಣಾ ಘಟಕದಲ್ಲಿ ಎರಡು ದಿನ ಇಡಲಾಗಿತ್ತು. ಮಂಗಳವಾರ ಆಗ್ರಾ ಪೊಲೀಸರು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಬಾಲಕಿ ಪೋಷಕರು ಮತ್ತು ಅಪಹರಿಸಿದ್ದ ಯುವಕನ ಪೋಷಕರೂ ಬಂದಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.