ಕೊರಟಗೆರೆ: ಪರಿಶಿಷ್ಟ ಜಾತಿಗೆ ಸೇರಿದ ನೂರು ಒಳಪಂಗಡಗಳು ಒಗ್ಗೂಡಿ ಡಿ. 29ರಂದು ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ದಲಿತ ಮುಖಂಡ ದಾಡಿ ವೆಂಕಟೇಶ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಒಳಮೀಸಲಾತಿ ಜಾರಿಗಾಗಿ ಜಾಗೃತಿ ಕೂಟದಲ್ಲಿ ಮಾತನಾಡಿದರು. ತುಮಕೂರಿನಲ್ಲಿ ಮಾದಿಗ ಮೀಸಲಾತಿ ಸಮಿತಿ ಡಿ. 28ರಿಂದ ಆಯೋಜಿಸಿರುವ ರಾಜ್ಯಮಟ್ಟದ ಅಹೋರಾತ್ರಿ ಧರಣಿಗೆ ಮಾದಿಗ ಮಾನವ ಹಕ್ಕುಗಳ ವೇದಿಕೆ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟ ಬೆಂಬಲ ಸೂಚಿಸುತ್ತದೆ ಎಂದು ತಿಳಿಸಿದರು.
ಮುಂಡರಾದ ಎ.ಗಂಗಾಧರ್, ಬೆಲ್ಲದಮಡು ಕೃಷ್ಣಪ್ಪ, ಚಿಕ್ಕರಂಗಯ್ಯ, ಸಿ.ಎಸ್.ಹನುಮಂತರಾಜು, ಬಿ.ಡಿ.ಪುರ ಸುರೇಶ್, ನರಸಿಂಹಪ್ಪ, ವೈ.ಎಚ್.ಹುಚ್ಚಯ್ಯ, ಡಾ.ಲಕ್ಷ್ಮಿಕಾಂತ್, ವೆಂಕಟೇಶ್, ಗಂಗಣ್ಣ, ಆನಂದ್, ಚಿಕ್ಕಣ್ಣ, ಡಾ.ಒ.ನಾಗರಾಜು, ರವಿಕುಮಾರ್ ನೀಹ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.