ADVERTISEMENT

ಕ್ಷೇತ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 4:47 IST
Last Updated 5 ಮಾರ್ಚ್ 2018, 4:47 IST
ಸಮಾರಂಭವನ್ನು ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಸಂಸದರಾದ ಡಿ.ಕೆ.ಸುರೇಶ್, ಎಸ್.ಪಿ.ಮುದ್ದಹನುಮೇಗೌಡ ಇದ್ದಾರೆ
ಸಮಾರಂಭವನ್ನು ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಸಂಸದರಾದ ಡಿ.ಕೆ.ಸುರೇಶ್, ಎಸ್.ಪಿ.ಮುದ್ದಹನುಮೇಗೌಡ ಇದ್ದಾರೆ   

ಕುಣಿಗಲ್: ಕಾಂಗ್ರೆಸ್ ಸರ್ಕಾರ 110 ತಾಲ್ಲೂಕಿನಲ್ಲಿ ತಲಾ 20ರಿಂದ 30 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ತೆಗೆದುಕೊಂಡ ಪರಿಣಾಮ ರೈತರಿಗೆ ಹಗಲಿನಲ್ಲೂ ವಿದ್ಯುತ್ ಸರಬರಾಜು ಮಾಡುವ ಮೂಲಕ ರೈತರಿಗೆ ಸಹಾಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನ ಅಮೃತೂರಿನಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ವತಿಯಿಂದ ಆಯೋಜಿಸಿದ್ದ ಕಚೇರಿಗಳ ಉದ್ಘಾಟನೆ, ವಿದ್ಯುತ್ ಉಪಸ್ಥಾವರ ಮತ್ತು ಎಚ್‌ವಿಡಿಎಸ್ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ತಾಲ್ಲೂಕಿನಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಅದರಲ್ಲೂ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ರೈತರಿಂದ ಬಂದ ಮನವಿ ಮೇರೆಗೆ 4 ಉಪಸ್ಥಾವರಗಳನ್ನು ಮಂಜೂರು ಮಾಡಲಾಗಿ 3 ಕಾಮಗಾರಿ ಮುಗಿದಿದೆ. ಒಂದು ಸ್ಥಾವರದ ಕಾಮಗಾರಿ ಬಾಕಿ ಇದೆ. ಎಚ್.ವಿ.ಡಿ.ಎಸ್ ಯೋಜನೆಯಡಿ ₹ 27ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡು ರೈತರಿಗೆ ನೆರವಾಗಿದ್ದೇವೆ ಎಂದು ಹೇಳಿದರು.

ADVERTISEMENT

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕುಣಿಗಲ್ ತಾಲ್ಲೂಕು ಅಭಿವೃದ್ಧಿಯತ್ತ ಸಾಗಿದೆ. ಸಚಿವರು ಸಹ ಕುಣಿಗಲ್ ಅಭಿವೃದ್ಧಿ ಬಗ್ಗೆ ಸಂಸದರಿಗೆ ನೆರವಾಗಿದ್ದಾರೆ. ಇಬ್ಬರಿಗೂ ಕುಣಿಗಲ್ ಕ್ಷೇತ್ರದ ಅಭಿಬೃದ್ಧಿ ಬಗ್ಗೆ ವಿಶೇಷ ಕಾಳಜಿ ಇದೆ ಎಂದರು.

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಕ್ತರ್, ಮುಖಂಡ ಆಡಿಟರ್ ನಾಗರಾಜು, ಡಾ.ರಂಗನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯ ಐ.ಜಿ.ವಿಶ್ವನಾಥ್, ತ್ರಿಪುರ ಸುಂದರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.