ಹುಳಿಯಾರು: ಪಟ್ಟಣದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಅಪಘಾತ ಸಂಖ್ಯೆ ಹೆಚ್ಚಿದೆ. ಇತರೆ ವಾಹನಗಳ ಸವಾರರು ರಸ್ತೆಗಿಳಿಯಲು ಭಯಪಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಳೆದ ವಾರ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯ ಸಾಲ್ಕಟ್ಟೆ ಕ್ರಾಸ್ನಿಂದ ಯಳನಡುವರೆಗಿನ 25 ಕಿ.ಮೀ ದೂರದಲ್ಲಿ ಮೂರು ಅಪಘಾತ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಮೂರು ತಿಂಗಳಿನಿಂದ ಹುಳಿಯಾರು, ಹಂದನಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಏಳೆಂಟು ಪ್ರಕರಣ ದಾಖಲಾಗಿವೆ.
ದಾಖಲಾಗಿರುವ ಎಲ್ಲ ಪ್ರಕರಣಗಳು ತುಮಕೂರು-1 ಕೆಎಸ್ಆರ್ಟಿಸಿ ವಿಭಾಗದ ಬಸ್ಗಳಾಗಿವೆ. ಎಲ್ಲವೂ ಹೊಸದುರ್ಗ-ಬೆಂಗಳೂರು ಮಧ್ಯೆ ಸಂಚರಿಸಿವೆ. ಬಸ್ಗಳಲ್ಲಿ 60ಕಿ.ಮೀ ಮೇಲೆ ಚಲಿಸದಂತೆ ವೇಗಮಿತಿ ಅಳವಡಿಸಲಾಗಿದ್ದರೂ ಅಚಾತುರ್ಯ ಸಂಭವಿಸುತ್ತಿವೆ.
ಬಸ್ಗಳನ್ನು ಊಟ-ತಿಂಡಿಗೆ ಹೊಟೆಲ್ಗಳ ಬಳಿ ನಿಲುಗಡೆ ಮಾಡಿ ಸಮಯ ಸರಿದೂಗಿಸಲು ವೇಗ ಚಾಲನೆಯೂ ಕಾರಣ ಇರಬಹುದು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಹಾಗೂ ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಜಂಟಿ ಕಾರ್ಯಾಚರಣೆ ನಡೆಸಿ ಅಪಘಾತ ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.