ADVERTISEMENT

ಹುಳಿಯಾರು ಪೊಲೀಸ್‌ ಠಾಣೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 1:07 IST
Last Updated 7 ಆಗಸ್ಟ್ 2021, 1:07 IST

ಹುಳಿಯಾರು: ಪಟ್ಟಣದ ಖಾಸಗಿ ಹಣಕಾಸು ಕಂಪನಿಯಲ್ಲಿ ನಡೆದಿದ್ದ ಅವ್ಯವಹಾರದ ವಸೂಲಾತಿ ಹಣದ ವಿಷಯವಾಗಿ ಪೊಲೀಸರ ವಿರುದ್ಧ ನೀಡಿದ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ತಂಡ ಶುಕ್ರವಾರ ಹುಳಿಯಾರು ಪೊಲೀಸ್‌ ಠಾಣೆ ಮೇಲೆ ದಾಳಿ ನಡೆಸಿ ತನಿಖೆ ನಡೆಸಿತು.

ಪಟ್ಟಣದಲ್ಲಿ ಹಣಕಾಸು ಸಂಸ್ಥೆಯೊಂದರ ವ್ಯವಸ್ಥಾಪಕ ಸುಮಾರು ₹50 ಲಕ್ಷವನ್ನು ಅವ್ಯವಹಾರ ಮಾಡಿದ್ದರು. ಹಣವನ್ನು ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿಸಿದ್ದರು. ಬೆಟ್ಟಿಂಗ್‌ ಹಣವನ್ನು ವ್ಯಕ್ತಿಯಿಂದ ವಸೂಲಾತಿ ಮಾಡುವ ವೇಳೆ ಹಣವನ್ನು ಪಟ್ಟಣದ ಮೊಬೈಲ್‌ ಅಂಗಡಿಯೊಂದರಲ್ಲಿ ಕೊಡುವಂತೆ ಹುಳಿಯಾರು ಪೊಲೀಸ್‌ ಠಾಣೆ ಪಿಎಸ್‌ಐ ಹೇಳಿದ್ದಾರೆ ಎನ್ನಲಾದ ಅಡಿಯೊ ಜಾಡು ಹಿಡಿದ ಎಸಿಬಿ ತಂಡ ಶುಕ್ರವಾರ ತಡ ರಾತ್ರಿವರೆಗೂ ತನಿಖೆ ನಡೆಸಿತು. ಮಧ್ಯಾಹ್ನ ಆರಂಭವಾದ ತನಿಖೆ ಸಂಜೆಯವರೆಗೂ ಮುಂದುವರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT