ADVERTISEMENT

ಅಪಘಾತ; ಮೂವರ ದುರ್ಮರಣ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 7:36 IST
Last Updated 4 ಜುಲೈ 2018, 7:36 IST
   

ಗುಬ್ಬಿ:ಇಲ್ಲಿನ ನಿಟ್ಟೂರು ಹೋಬಳಿ ಬೆಣಿಚಿಗೆರೆ ಗೇಟ್ ನ ಗ್ರೀನ್ ವುಡ್ ಶಾಲೆಯ ಮುಂಭಾಗ ಮಂಗಳವಾರ ರಾತ್ರಿ ಬೈಕ್ ಮತ್ತು ಮಹಿಂದ್ರ ಕಾರು ನಡುವೆ ಡಿಕ್ಕಿ ಸಂಭವಿಸಿ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರು ತುಮಕೂರು ನಗರದ ಪುರಸ್ ಕಾಲೋನಿ ವಾಸಿಗಳಾದ ಸೈಯದ್ ಇರ್ಫಾನ್ (28), ಅಕ್ಬರ್ ಪಾಷಾ 40), ಇರ್ಫಾನ್ ಪಾಷಾ (18). ಈ ಮೂವರು ನಿಟ್ಟೂರು ಹೋಬಳಿ ತ್ಯಾಗಟೂರಿನಲ್ಲಿ ಮೆಕಾನಿಕ್ ಕೆಲಸ ಮುಗಿಸಿಕೊಂಡು ಒಂದೇ ಬೈಕ್ ನಲ್ಲಿ ತುಮಕೂರಿಗೆ ಹಿಂತಿರುಗುತ್ತಿದ್ದರು.

ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಏಳೆಂಟು ಮೀಟರ್ ದೂರದಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಗುರುತು ಪತ್ತೆಮಾಡಲು ಪೊಲೀಸರು ಪರದಾಡಿದ್ದಾರೆ. ಪ್ರಕರಣ ಗುಬ್ಬಿ ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.